ADVERTISEMENT

ಸಿಡಿಲಿಗೆ ಮರಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 16:26 IST
Last Updated 22 ಏಪ್ರಿಲ್ 2021, 16:26 IST

ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ‌‌ ಮಂಗಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲಿಗೆ ತೆಂಗಿನ ಮರಗಳು ಸುಟ್ಟಿವೆ.
ಗ್ರಾಮದ ಬಣಕಾರ ಶರಣಪ್ಪ, ಕಪ್ಲಿ ಸಿದ್ದೇಶಪ್ಪ, ಮರುಳಸಿದ್ದಪ್ಪ ಅವರ ಮನೆಯ ಆವರಣದಲ್ಲಿರುವ ತೆಂಗಿನ‌ ಮರಗಳು ಸಿಡಿಲಿಗೆ ಸುಟ್ಟು ಹೋಗಿವೆ.

ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.‌

ತಾಲ್ಲೂಕಿನದ್ಯಾಂತ ಮೋಡ ಕವಿದ ವಾತಾವರಣದೊಂದಿಗೆ ಗುಡುಗು, ಸಿಡಿಲಿನ ಆರ್ಭಟವಿದೆ. ಉಜ್ಜಯನಿಯಲ್ಲಿ ಕೆಲಕಾಲ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.