ADVERTISEMENT

ವಿಜಯನಗರ: ಬಾವಿಗೆ ಬಿದ್ದ ಕರಡಿ ರಕ್ಷಣೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 7:15 IST
Last Updated 27 ಜೂನ್ 2022, 7:15 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಇಲ್ಲಿನ ಮಡ್ಲಾಕನಹಳ್ಳಿ ಗ್ರಾಮದ ಪಾಳು ಬಾವಿಯೊಳಗೆ ಬಿದ್ದಿರುವ ಕರಡಿ ರಕ್ಷಣೆಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದಾರೆ.

ಕರಡಿಗೆ ಅರವಳಿಕೆ ಕೊಟ್ಟು ಮೇಲೆ ತರಲು ಮುಂದಾಗಿದ್ದಾರೆ. ಗ್ರಾಮಕ್ಕೆ ಸೋಮವಾರ ಬೆಳಿಗ್ಗೆ ಮೂರು ಕರಡಿಗಳು ಬಂದಿದ್ದವು. ಇದರಲ್ಲಿ ಒಂದು ಕರಡಿ ಮನೆಯೊಳಗೆ ನುಗ್ಗಿತ್ತು. ಅರಣ್ಯ ಇಲಾಖೆಯವರು ಬಲೆ ಹಾಕಿ ಹಿಡಿಯಲು ಮುಂದಾಗಿದ್ದರು. ಆದರೆ, ತಪ್ಪಿಸಿಕೊಂಡು ಓಡುವಾಗ ಪಾಳು ಬಾವಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT