ADVERTISEMENT

ಅನರ್ಹರಿಗೆ ಬಿಪಿಎಲ್‌ ಕಾರ್ಡ್‌: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 5:49 IST
Last Updated 13 ಮಾರ್ಚ್ 2014, 5:49 IST

ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಅನರ್ಹ ಬಿ.ಪಿ.ಎಲ್. ಕಾರ್ಡ್‌ದಾರ ರನ್ನು ಪತ್ತೆ ಹಚ್ಚಲು ತಾಲ್ಲೂಕು ಆಡಳಿತ ನಿರ್ಧರಿಸಿದೆ. 
ಒಂದೊಮ್ಮೆ ಅಕ್ರಮವಾಗಿ (ಸರ್ಕಾರ ನಿಗದಿ ಪಡಿಸಿದ ಮಾನದಂಡಗಳನ್ನು ಮೀರಿ) ಇಂಥ ಕಾರ್ಡ್‌ ಹೊಂದಿದ್ದರೆ ಅಂಥವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.  ಅನರ್ಹರನ್ನು  ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಗಳು ಈಗಾಗಲೇ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ ಎಂದು ತಾಲ್ಲೂಕು ಪ್ರಭಾರ ತಹಶೀಲ್ದಾರ್ ಎಂ.ಬಿ. ಪಾಟೀಲ ಹಾಗೂ ಆಹಾರ ನಿರೀಕ್ಷಕ ಎ.ವಿ.ತಾಂಡೂರ  ತಿಳಿಸಿದ್ದಾರೆ. 

ಯಾರು ಬಿಪಿಎಲ್ ಕಾರ್ಡ್‌ ಹೊಂದುವಂತಿಲ್ಲ ಎಂದರೆ, ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳ­ಗೊಂಡ ಎಲ್ಲ ಕುಟುಂಬಗಳು, ಎಲ್ಲ ವರ್ಗದ ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಮಂಡಳಿ ಗಳು, ನಿಗಮ ಕಾಯಂ ನೌಕರರು, ಸ್ವಾ ಯತ್ತ ಸಂಸ್ಥೆಯ ಮಂಡಳಿ ನೌಕರರು.

ಸಹಕಾರ ಸಂಘಗಳ ಕಾಯಂ ಸಿಬ್ಬಂದಿ, ವೃತ್ತಿಪರ ವರ್ಗಗಳಾದ ವೈದ್ಯರು, ಸರ್ಕಾರಿ ಆಸ್ಪತ್ರೆಗಳ ನೌಕ ರರು, ಲೆಕ್ಕ ಪರಿಶೋಧಕರು, ಸೈಕಲ್ ಮೇಲೆ ಅಥವಾ ಗಾಡಿಗಳ ಮೇಲೆ ತಳ್ಳಿಕೊಂಡು ಅಥವಾ ರಸ್ತೆಯ ಪಕ್ಕ ದಲ್ಲಿ ಕುಳಿತು ವ್ಯಾಪಾರ ಮಾಡುವ ಮತ್ತು ತರಕಾರಿ ಮಾತ್ರ ವ್ಯಾಪಾರ ಮಾಡುವ ಹಾಗೂ ಗೂಡಂಗಡಿಗಳಲ್ಲಿ ವ್ಯಾಪಾರ ಮಾಡುವವರನ್ನು ಹೊರತು ಪಡಿಸಿ, ಉಳಿದ ಎಲ್ಲ ವ್ಯಾಪಾರಸ್ಥರು, 3 ಹೆಕ್ಟರ್ (ಏಳುವರೆ ಎಕರೆ) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು, ಒಂದು ಅಟೋರಿಕ್ಷಾ ವನ್ನು ಹೊಂದಿ, ಸ್ವತ: ಒಡಿಸುತ್ತಿದ್ದು ಬೇರೆ ಆದಾಯದ ಮೂಲವಿಲ್ಲ ದವ ರನ್ನು ಹೊರತುಪಡಿಸಿ, 100 ಸಿ.ಸಿ.ಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನ ಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ.

ನೊಂದಾಯಿತ ಗುತ್ತಿಗೆದಾರರು, ಎ.ಪಿ.ಎಂ.ಸಿ. ಟ್ರೇಡರ್ಸ್‌,  ಕಮಿಷನ್ ಏಜೆಂಟ್ಸ್,  ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್, ಮನೆ, ಮಳಿಗೆ, ಕಟ್ಟಡಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುವವರು, ಪ್ರತಿ ತಿಂಗಳಿಗೆ ಸರಾಸರಿ ವಿದ್ಯುತ್ ಬಿಲ್ ₨ 450ಕ್ಕಿಂತ ಮೇಲ್ಪಟ್ಟು ಪಾವತಿಸುವ ಕುಟುಂಬ, ಬಹುರಾಷ್ಟ್ರೀಯ ಕಂಪನಿ ಉದ್ದಿಮೆ, ಕೈಗಾರಿಕೆಗಳ ನೌಕರರು ಈ ಮೇಲೆ ಹೆಸರಿಸಲಾದ ಕುಟುಂಬದವರು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಇವರು ಬಿಪಿಎಲ್ ಕಾರ್ಡು ಹೊಂದಿ ದ್ದರೆ, ವಾರದೊಳಗೆ ಅವುಗಳನ್ನು ಇಲಾಖೆಗೆ ಹಿಂತಿರುಗಿಸಬೇಕು. ಇಲ್ಲವಾ ದರೆ ಕಾನೂನಾತ್ಮಕ ಕ್ರಮ ಅನಿವಾ ರ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.