ADVERTISEMENT

ಆರನೇ ದಿನಕ್ಕೆ ಕಾಲಿಟ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 10:19 IST
Last Updated 23 ಅಕ್ಟೋಬರ್ 2017, 10:19 IST

ಬಸವನಬಾಗೇವಾಡಿ: ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮುಂಭಾಗದ ಜಾಗೆಯನ್ನು ಬಿಜ್ಜಳ-ಮನಗೂಳಿ ರಾಜ್ಯ ಹೆದ್ದಾರಿಗೆ ಪಡೆಯು ವದನ್ನು ವಿರೋಧಿಸಿ ಬಸವೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ನೇತೖತ್ವ ದಲ್ಲಿ ಹಮ್ಮಿಕೊಂಡಿರುವ ಧರಣಿಯು ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿತು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಕುಂಟೋಜಿ, ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಭಕ್ತರು ಸೇರಿದಂತೆ ಪ್ರವಾಸಿಗರು ಬರುತ್ತಾರೆ. ಅಲ್ಲದೇ ದೇವಸ್ಥಾನದ ಆವರಣ ದಲ್ಲಿ ಶಾಲಾ, ಕಾಲೇಜುಗಳ ತರಗತಿ ನಡೆಯುತ್ತದೆ. ಹಲವು ಬ್ಯಾಂಕ್‌ಗಳಿವೆ.

ನೂರಾರು ಜನರು ಈ ಪ್ರಮುಖ ರಸ್ತೆ ದಾಟಿ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ದೇವಸ್ಥಾನದ ಮುಂಭಾಗದಲ್ಲಿ ಹಾದು ಹೋಗುವ ಮನಗೂಳಿ–ಬಿಜ್ಜಳ ರಾಜ್ಯ ಹೆದ್ದಾರಿಗಾಗಿ ಪಟ್ಟಣದ ಹೊರ ವಲಯದಲ್ಲಿ ವರ್ತುಲ್‌ ರಸ್ತೆ ನಿರ್ಮಾಣ ಮಾಡುವ ಅಗತ್ಯತೆ ಇದೆ ಎಂದು ಹೇಳಿದರು.ರಾಜ್ಯ ಹೆದ್ದಾರಿ ಕಾಮಗಾರಿಗೆ ಬಸವೇಶ್ವರ ದೇವಸ್ಥಾನದ ಮುಂಭಾಗದ ಜಾಗೆ, ದಿ.ಮಲ್ಲಪ್ಪ ಸಿಂಹಾಸನ ಆವರಣದ ಜಾಗ ಪಡೆದುಕೊಳ್ಳುವುದು ಸರಿಯಲ್ಲ ಎಂದರು.

ADVERTISEMENT

ಸಂಗನಗೌಡ ಚಿಕ್ಕೊಂಡ, ಪ್ರವೀಣ ಪವಾರ, ರಾಜು ಮುಳವಾಡ, ಪರಶು ರಾಮ ಅಡಗಿಮನಿ, ಸಂಗಪ್ಪ ಚೌರ, ಚನ್ನಪ್ಪ ಅವಡಗಿಮನಿ, ಪರಶುರಾಮ ಜಮಖಂಡಿ, ಬಾಬು ನಿಕ್ಕಂ, ಶಂಕ್ರೆಪ್ಪ ಹಾರಿವಾಳ, ಮುದಕಪ್ಪ ಅವಟಿ, ನಿಂಗಪ್ಪ ಕುಳಗೇರಿ, ಶಿವಪ್ಪ ಒಡೆಯರ, ಭೀಮಪ್ಪ ಗುಡ್ಡದ, ಪ್ರಶಾಂತ ಪೂಜಾರಿ, ಮಲ್ಲಿಕಾರ್ಜುನ ಕಿಣಗಿ, ಚನ್ನಪ್ಪ ಗಬ್ಬೂರ, ಚಂದು ಹಂಚಾಟೆ, ಅನಿಲ ಕುಲಕರ್ಣಿ, ಮಲ್ಲನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.