ADVERTISEMENT

ನಮ್ಮವರು ಎಂದಾಗ ಸಾಮರಸ್ಯ ಬೆಳೆಯುವುದು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:25 IST
Last Updated 22 ಫೆಬ್ರುವರಿ 2012, 8:25 IST
ನಮ್ಮವರು ಎಂದಾಗ ಸಾಮರಸ್ಯ ಬೆಳೆಯುವುದು
ನಮ್ಮವರು ಎಂದಾಗ ಸಾಮರಸ್ಯ ಬೆಳೆಯುವುದು   

ಬಸವನಬಾಗೇವಾಡಿ: `ಭೂಮಿಯ ಮೇಲೆ ಯಾವುದು ಶಾಶ್ವತ ಅಲ್ಲ. ನನ್ನದು ಎಂದು ಬಡಿದಾಡುವ ನಾವುಗಳು ನಮ್ಮವರು ಎಂದು ಬಡಿದಾಡಿದಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ~ ಎಂದು ನಾಗಣಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕರಿಭಂಟನಾಳ ಗ್ರಾಮದ ಗುರು ಗಂಗಾಧರೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ಜಾಗೃತಗೊಳಿಸಲು ಮಠಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಮಠಗಳಲ್ಲಿ ಕರಭಂಟನಾಳ ಮಠವು ಒಂದು. ಗ್ರಾಮೀಣ ಪ್ರದೇಶದಲ್ಲಿರುವ ಈ ಮಠದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಹಾಗೂ ದಾಸೋಹ ವ್ಯವಸ್ಥೆ ಮಾಡಿರು ವುದು ಉತ್ತಮ ಕೆಲಸ. ಇಂತಹ ಕೆಲಸಗಳಿಗೆ ಭಕ್ತರು ಪ್ರೋತ್ಸಾಹಿಸ ಬೇಕು. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ),  ವೀರಶೈವ ಮಠಗಳು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಹಾಗೆಯೇ ಕರಭಂಟನಾಳ ಮಠದ ಕೊಡುಗೆ ಅಪಾರ ಎಂದರು.
ನಿಜಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಗುರುನಾಥ ಪಾಟೀಲ,  ಡಾ. ವಿಶ್ವನಾಥ ಮಠ, ಬೀರಪ್ಪ ಸಾಸನೂರ, ರಮಜಾನ್ ಮುಜಾವರ ಲಕ್ಷ್ಮಿಬಾಯಿ ಗೊಡಗುಂಡಗಿ ವೇದಿಕೆಯಲ್ಲಿದ್ದರು. ಈರಯ್ಯ ಹಿರೇಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.