ADVERTISEMENT

ಪೊಲೀಸ್ ದೌರ್ಜನ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 7:30 IST
Last Updated 8 ಫೆಬ್ರುವರಿ 2012, 7:30 IST

ಬಸವನಬಾಗೇವಾಡಿ: ಆಟೋ ಚಾಲಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ವೀರಗಣೇಶ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಮಂಗಳವಾರ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದ ಸಮೀಪ ಸೋಮವಾರ ಸಂಜೆ ಆಟೋ ಚಾಲಕ ಸಗರಾಜ ಕಾಮನಹಟ್ಟಿ ಎಂಬುವರಿಗೆ ಪ್ರೊಬೇಷನರಿ ಪಿಎಸ್‌ಐ ರವಿಕಿರಣ ಥಳಿಸಿದ್ದರಿಂದ ಚಾಲಕ ಗಾಯಗೊಂಡ ವಿಷಯ ತಿಳಿದ  ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.

ಬಡ ಚಾಲಕರ ಮೇಲೆ ಪ್ರೊಬೇಷನರಿ ಪಿಎಸ್‌ಐ ಈ ರೀತಿ ದೌರ್ಜನ್ಯ ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಸುನೀಲ ನಾಯಕ ಟ್ರಾಫಿಕ್ ಕಂಟ್ರೋಲ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಇನ್ನೂ ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗು ವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಬಸವರಾಜ ಕುಂಬಾರ, ರಮೇಶ ವಂದಾಲ, ಮಹಾಂತೇಶ ಹಳ್ಳಿ, ಗುರುರಾಜ ನಾಲತವಾಡ, ಅಪ್ಪು ದಳವಾಯಿ, ಶ್ರೀಶೈಲ ಒಡೆಯರ, ಮುತ್ತು ಮದರಿ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.