ADVERTISEMENT

ಬಂಗಾರ ಪಡೆದ ಪತ್ತಾರರು ಪರಾರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 10:15 IST
Last Updated 7 ಅಕ್ಟೋಬರ್ 2011, 10:15 IST

ವಿಜಾಪುರ: ಅಂಗಡಿ ಬಾಡಿಗೆ ಹಿಡಿದ ಪತ್ತಾರರು ಆಭರಣ ಮಾಡಿಕೊಡುತ್ತೇವೆ ಎಂದು ಮಾಲಿಕರಿಂದಲೇ ಬಂಗಾರ ಪಡೆದು ವಂಚಿಸಿ ಪರಾರಿಯಾದ ಘಟನೆ ಜಿಲ್ಲೆಯ ಮಟ್ಟಿಹಾಳ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

ಗ್ರಾಮದ ಲಕ್ಷಿಂಬಾಯಿ ಎಂಬ ಮಹಿಳೆಯು ಸುಮಾರು 3 ವರೆ ತೊಲ ಬಂಗಾರ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾಳೆ.

ಶಿಗ್ಗಾಂವಿ ತಾಲ್ಲೂಕಿನ ಹುಲಗೂರ ಗ್ರಾಮದ ಮಂಜುನಾಥ ಬಾಬಣ್ಣ ವೇರಣೆಕರ ಮತ್ತು ಇನ್ನು ನಾಲ್ಕು ಜನರು ಸೇರಿಕೊಂಡು ಮಟ್ಟಿಹಾಳ ಗ್ರಾಮದ ಲಕ್ಷಿಂಬಾಯಿ ಎಂಬುವರ ಅಂಗಡಿ ಬಾಡಿಗೆ ಪಡೆದರು. ಪತ್ತಾರರು ಆಭರಣ ಮಾಡಿಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಈ ಬಂಗಾರ ಪಡೆದು ಮರಳಿ ಕೊಡದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.