ದೇವರ ಹಿಪ್ಪರಗಿ: ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಅಸಮರ್ಪಕ ವಿತರಣೆ ಹಾಗೂ ಅವ್ಯವಹಾರ ವಿರೋಧಿಸಿ ಮುಳಸಾವಳಗಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಕೆಲ ತಿಂಗಳುಗಳಿಂದ ಸೀಮೆಎಣ್ಣೆ ಸೇರಿದಂತೆ ಪ್ರತಿ ತಿಂಗಳು ವಿತರಿಸುವ ಪಡಿತರವನ್ನು ಸರಿಯಾದ ಸಮಯಕ್ಕೆ ನೀಡದ ಕಾರಣ ಜನರಿಗೆ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ ‘ಅವಾಚ್ಯ ಶಬ್ದದಿಂದ ಅವಮಾನಿಸುತ್ತಾರೆ. ಇದರಿಂದ ಬೇಸತ್ತ ಜನ ವಿತರಣೆ ಮಾಡುವವರ ಹತ್ತಿರ ಮಾತನಾಡಲು ಆಗದಂತಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸಬೇಕಾಯಿತು’ ಎಂದು ವೇದಿಕೆಯ ಅಧ್ಯಕ್ಷ ಶಾಂತು ನಾಗರಳ್ಳಿ ಹೇಳಿದರು.
ರೈತ ಘಟಕದ ಅಧ್ಯಕ್ಷ ಉಮೇಶ ಬಿರಾದಾರ‘ಈಗಿರುವ ಪಡಿತರ ವಿತರಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಣೆ ಮಾಡುವುದಿಲ್ಲ’ ಎಂದರು. ಪದಾಧಿಕಾರಿಗಳಾದ ಯಲ್ಲಾಲಿಂಗ ನಾಗಠಾಣ, ದಾವುದ್ ಇನಾಮದಾರ, ವಿಠ್ಠಲ ಬಿರಾದಾರ, ಮಾಂತೇಶ ಬಮನಳ್ಳಿ, ಗೌಡಪ್ಪ ಬಸರಕೋಡ, ಗುರುಸಂಗ ನಾಗರಳ್ಳಿ, ಶ್ರೀಶೈಲ ಮೆಳ್ಳಿಗೇರಿ, ಅಬ್ಬಾಸಲಿ ಪಠಾಣ, ಬಸು ನಾಟೀ ಕಾರ, ರಾಜು ಬೂದಿಹಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.