ADVERTISEMENT

ವಾಹನ ಪಲ್ಟಿ; 20ಕ್ಕೂಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 15:38 IST
Last Updated 13 ಆಗಸ್ಟ್ 2019, 15:38 IST

ವಿಜಯಪುರ: ಸಿಂದಗಿ ಪಟ್ಟಣದ ಬಸ್ ಡಿಪೋ ಬಳಿ ಮಂಗಳವಾರ ವಾಹನ ಪಲ್ಟಿಯಾಗಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಹೀಂದ್ರ ಪಿಕ್ ಅಪ್ ವಾಹನದ ಹಿಂಬದಿಯ ಟೈರ್ ಬಳಿಯ ಆ್ಯಕ್ಸೆಲ್ ಕತ್ತರಿಸಿದ್ದರಿಂದ ಈ ಅವಘಡ ನಡೆದಿದೆ. ಇವರೆಲ್ಲರೂ ಅಂತ್ಯಸಂಸ್ಕಾರ ಮುಗಿಸಿಕೊಂಡು ವಾಪರು ಸ್ವಗ್ರಾಮ ಕೆರೂರಿಗೆ ತೆರಳುತ್ತಿದ್ದರು.

ಗಾಯಾಳುಗಳಿಗೆ ಸಿಂದಗಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.