ADVERTISEMENT

ಆಲಮಟ್ಟಿ | ಹೆಚ್ಚಿದ ಹೊರಹರಿವು, 1.40 ಲಕ್ಷ ಕ್ಯೂಸೆಕ್ ಹೊರಹರಿವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:38 IST
Last Updated 30 ಜುಲೈ 2025, 2:38 IST
ಗಾಳಿ ಬೀಸುತ್ತಿದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯ ಅಲೆಗಳು ರಭಸದಿಂದ ದಂಡೆಗೆ ಬಂದು ಅಪ್ಪಳಿಸುತ್ತಿವೆ. ಇಂತಹ ದೊಡ್ಡ ತೆರೆಗಳು ಮಂಗಳವಾರ ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಕಂಡು ಬಂದಿದ್ದು ಹೀಗೆ (ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ)
ಗಾಳಿ ಬೀಸುತ್ತಿದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯ ಅಲೆಗಳು ರಭಸದಿಂದ ದಂಡೆಗೆ ಬಂದು ಅಪ್ಪಳಿಸುತ್ತಿವೆ. ಇಂತಹ ದೊಡ್ಡ ತೆರೆಗಳು ಮಂಗಳವಾರ ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಕಂಡು ಬಂದಿದ್ದು ಹೀಗೆ (ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ)   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಿದ್ದರಿಂದ, ಆಲಮಟ್ಟಿ ಜಲಾಶಯದ ಹೊರಹರಿವನ್ನು ಮಂಗಳವಾರ, 1.40 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ, ಘಟಪ್ರಭಾ ಅಚ್ಚುಕಟ್ಟು ಪ್ರದೇಶದಿಂದಲೂ ನದಿಗೆ ಒಳಹರಿವು ಹೆಚ್ಚಿದ್ದು, ಇದರಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಸಂಜೆಯ ವೇಳೆಗೆ 1,51,416 ಕ್ಯೂಸೆಕ್‌ಗೆ ಹೆಚ್ಚಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳಿಂದ ಅಬ್ಬರಿಸಿದ್ದ ಮಳೆ, ಮಂಗಳವಾರ ಸ್ವಲ್ಪ ಕಡಿಮೆಯಾಗಿದೆ. ಕೊಯ್ನಾ 4.5 ಸೆಂ.ಮೀ, ನವಜಾ 5.3 ಸೆಂ.ಮೀ, ಮಹಾಬಳೇಶ್ವರ 6.9 ಸೆಂ.ಮೀ, ರಾಧಾನಗರಿ 6.6 ಸೆಂ.ಮೀ, ತರಳಿ 4.4 ಸೆಂ.ಮೀ, ವಾರಣಾ 4.5 ಸೆಂ.ಮೀ ಮಳೆಯಾಗಿದೆ. ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬಳಿ ಕೃಷ್ಣೆಯ ಹರಿದು 1,10,050 ಕ್ಯೂಸೆಕ್ ಇದೆ. ದೂಧಗಂಗಾ ನದಿಯ ಹರಿವು 19,008 ಕ್ಯೂಸೆಕ್ ಸೇರಿ ಬೆಳಗಾವಿ ಜಿಲ್ಲೆ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 1,29,508 ಕ್ಯೂಸೆಕ್ ಇದೆ. ಸೋಮವಾರಕ್ಕಿಂತ 10,306 ಕ್ಯೂಸೆಕ್ ನೀರು ಮಂಗಳವಾರ ಹೆಚ್ಚಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ADVERTISEMENT

ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಮಳೆ ಹೆಚ್ಚಾಗಿದೆ. ಲೋಳಸೂರ ಬ್ಯಾರೇಜ್ ಬಳಿ 28,580 ಕ್ಯೂಸೆಕ್ ಹರಿವು ಇದ್ದು, ಹೀಗಾಗಿ ಆಲಮಟ್ಟಿ ಜಲಾಶಯದ ಒಳಹರಿವು ಮುಂದಿನ ಮೂರು ದಿನಗಳ ಕಾಲ ಹೆಚ್ಚಿರಲಿದೆ. ಮುಂಜಾಗ್ರತೆಯ ಕ್ರಮವಾಗಿ ಬೆಳಿಗ್ಗೆ 1,20,000 ಕ್ಯೂಸೆಕ್ ಇದ್ದ ಆಲಮಟ್ಟಿ ಜಲಾಶಯದ ಹೊರಹರಿವನ್ನು ಬೆಳಿಗ್ಗೆ 10 ಕ್ಕೆ 1.40 ಲಕ್ಷ ಕ್ಯೂಸೆಕ್ ಹೆಚ್ಚಿಸಲಾಯಿತು.
519.6 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ಮಂಗಳವಾರ ಸಂಜೆ 517.91 ಮೀ ವರೆಗೆ ನೀರು ಇತ್ತು. ಜಲಾಶಯದಲ್ಲಿ 96.445 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ.

ಆಲಮಟ್ಟಿ ಜಲಾಶಯದ ಹೊರಹರಿವು ಸದ್ಯಕ್ಕೆ ಇಷ್ಟೇ ಇರಲಿದ್ದು ಇನ್ನೂ ಹೆಚ್ಚಾಗುವ ಸಾಧ್ಯತೆ ಕಡಿಮೆ. ಜಲಾಶಯದ ಮುಂಭಾಗದಲ್ಲಿ ಯಾವುದೇ ಪ್ರವಾಹದ ಸ್ಥಿತಿ ಇಲ್ಲ ಎಂದು ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದ್ದಾರೆ.

ಗಾಳಿ ಬೀಸುತ್ತಿದ್ದು ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯ ಅಲೆಗಳು ರಭಸದಿಂದ ದಂಡೆಗೆ ಬಂದು ಅಪ್ಪಳಿಸುತ್ತಿವೆ. ಇಂತಹ ದೊಡ್ಡ ತೆರೆಗಳು ಮಂಗಳವಾರ ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಕಂಡು ಬಂದಿದ್ದು ಹೀಗೆ (ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.