ಪ್ರಾತಿನಿಧಿಕ ಚಿತ್ರ
ಮುದ್ದೇಬಿಹಾಳ: ತಾಲ್ಲೂಕಿನ ಅಮರಗೋಳ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಫೆ.22 ರಂದು ತ್ರಿಪದಿ ಕವಿ ಮಲಕಣ್ಣ ಮಾಸ್ತರ ಅಮರಗೋಳ (ಮಲಿಕಸಾಬ ನದಾಫ) ಅವರ ಸ್ಮರಣೋತ್ಸವ, ಸಾಹಿತ್ಯ ರತ್ನ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ವಿಜಯಪುರದ ವಿನೋದ ಹಿರೇಮಠ, ಮಹಾದೇವಯ್ಯಶಾಸ್ತ್ರಿ ಹಿರೇಮಠ ಸಾನ್ನಿಧ್ಯ ವಹಿಸುವರು. ಇಳಕಲ್ನ ಉಪನ್ಯಾಸಕ ಲಾಲಹುಸೇನ ಕಂದಗಲ್ಲ ಉದ್ಘಾಟಿಸುವರು. ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸುವರು. ಕಾಶಿಂಬಿ ಮಲಿಕಸಾಬ ನದಾಫ, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಅಬ್ದುಲ್ ರಹೆಮಾನ ಬಿದರಕುಂದಿ, ಅಶೋಕ ಮಣಿ, ಉಪನ್ಯಾಸಕ ಡಾ.ಪ್ರಕಾಶ ನರಗುಂದ ಭಾಗವಹಿಸುವರು.
ಇಳಕಲ್ನ ಮುರ್ತುಜಾಬೇಗಂ ಕೊಡಗಲಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಅಕ್ಕಮಹಾದೇವಿ ಹಗರಟಗಿ, ಗಂಗಾಬಾಯಿ ಬಿರಾದಾರ, ಶಾಂತಾಬಾಯಿ ಪಣೇದಕಟ್ಟಿ, ಮಮತಾಜಬೇಗಂ ಹೊನವಾಡ, ಮುನಿರಾಬೇಗಂ ಇಸ್ಲಾಂಪುರ, ಶಾಂತಾ ಅಂಬಿಗೇರ, ಸುವರ್ಣಾ ಕಂಠಿ, ಬಸವಂತಪ್ಪ ನಾಟಿಕಾರ, ರಾಜೇಸಾಬ ಹಿರೇಮನಿ, ಅವ್ವಣ್ಣ ಬಡಿಗೇರ, ಹಬೀಬುಲ್ಲಾ ಕೆಂಭಾವಿ, ಮೋಹನಬಾಬು ಬಿ. ಎಸ್. ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.