ADVERTISEMENT

ಕಳ್ಳರ ಬಂಧನ: ₹17.50 ಲಕ್ಷ ಮೌಲ್ಯದ ನಗ, ನಗದು ವಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 13:44 IST
Last Updated 7 ಅಕ್ಟೋಬರ್ 2021, 13:44 IST
ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡಿರುವ ನಗ, ನಗದು, ಚಿನ್ನಾಭರಣದೊಂದಿಗೆ ವಿಜಯಪುರ ಜಿಲ್ಲಾ ಪೊಲೀಸರು –ಪ್ರಜಾವಾಣಿ ಚಿತ್ರ
ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡಿರುವ ನಗ, ನಗದು, ಚಿನ್ನಾಭರಣದೊಂದಿಗೆ ವಿಜಯಪುರ ಜಿಲ್ಲಾ ಪೊಲೀಸರು –ಪ್ರಜಾವಾಣಿ ಚಿತ್ರ   

ವಿಜಯಪುರ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆ ಪೊಲೀಸರು ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ₹17.50 ಲಕ್ಷ ಮೌಲ್ಯದ ನಗ, ನಗದು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ನಗರದ ರೈಲು ನಿಲ್ದಾಣ ಸಮೀಪದ ಚೌಗಲೆ ಕಂಪೌಂಡ್‌ನ ಭರತ್ ಅಗರವಾಲ್(43), ಪೇಟೆ ಬಾವಡಿಯ ವಾಸಿಂ ಶೇಖ್(35) ಮತ್ತು ಮಹಾರಾಷ್ಟ್ರ ರಾಜ್ಯದ ಪುಣಿ ಜಿಲ್ಲೆಯ ಕಲವಾಡಿಯ ಅಕ್ಬರ್ ಶೇಖ್(32) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ 70 ಗ್ರಾಂ ಬಂಗಾರದ ಆಭರಣ, 20 ಕೆ.ಜಿ.ಬೆಳ್ಳಿ ಆಭರಣ ಹಾಗೂ ₹ 5 ಲಕ್ಷ ನಗದು ಸೇರಿದಂತೆ ಒಟ್ಟು ₹17.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಡಿಎಸ್ ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐ ರಮೇಶ ಅವಜಿ, ಗೋಳಗುಮ್ಮಟ ಪಿಎಸ್ ಐ ಸೀತಾರಾಮ ಲಮಾಣಿ, ಜಲನಗರ ಠಾಣೆ ಪಿಎಸ್ ಐ ಎಸ್.ಎಂ.ಶಿರಗುಪ್ಪಿ, ಸೋಮೇಶ ಗೆಜ್ಜೆ, ಪ್ರೇಮಾ ಕುಚಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.