ವಿಜಯಪುರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಹರ್ಷಿ ಭಗೀರಥರ ಜಯಂತಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ದೀಪ ಬೆಳಗಿಸುವುದರ ಮೂಲಕ ಜಯಂತಿ ಸಮಾರಂಭ ಉದ್ಘಾಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಸೋಮನಗೌಡ ಕಲ್ಲೂರ, ಉಪ್ಪಾರ ಸಮಾಜದ ಅಧ್ಯಕ್ಷ ಜಕ್ಕಪ್ಪ ಎಸ್.ಎಡವೆ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ.ಶಿವಣ್ಣವರ, ಭಾರತಿ ಗೋವಿಂದರಾವ್ ಟಂಕಸಾಲಿ, ಗೌರವಾಧ್ಯಕ್ಷ ವಿಶ್ವನಾಥ ನರಳಿ, ಮಾಲಿಂಗ ಉಪ್ಪಾರ, ಲಕ್ಷ್ಮಣ ಉಪ್ಪಾರ, ಸಹದೇಶ ಬೆಳಗಲಿ, ಮಲ್ಲು ಶಿವಣ್ಣವರ, ಪೂಗ್ಲಿ ಉಪ್ಪಾರ, ಬಸವರಾಜ್, ರಂಗು ಮಂಜೆ, ಶಿವಾನಂದ ಎನ್.ಕಟ್ಟಿಮನಿ, ಸಿದ್ದು ಬಾವಿಕಟ್ಟಿ, ಸಂತೋಷ್ ರಾಥೋಡ್, ರಾಜೇಂದ್ರ ಉಪ್ಪಾರ, ಅನಿಲ ಉಪ್ಪಾರ, ಆನಂದ ಗಣಗಾರ, ಡಿ.ವೈ.ಉಪ್ಪಾರ, ಸಂಗನಬಸವ ಹಳಕಟ್ಟಿ, ಕಾಶಿನಾಥ ಹಳಕಟ್ಟಿ ಉಪಸ್ಥಿತರಿದ್ದರು.
ಜ್ಯೋತಿರ್ಲಿಂಗ ದರ್ಶನಕ್ಕೆ ಪಯಣ: ವಿಜಯಪುರ ತಾಲ್ಲೂಕಿನ ಐನಾಪುರ ಮಹಲ್ ಗ್ರಾಮದ 48 ಜನರು ದೇಶದ ವಿವಿಧೆಡೆಯಿರುವ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ 16 ದಿನದ ಬಸ್ ಪ್ರಯಾಣವನ್ನು ಶುಕ್ರವಾರ ಸಂಜೆ ಗ್ರಾಮದಿಂದ ಆರಂಭಿಸಿದರು. ಸ್ಥಳೀಯರು ಶುಭ ಹಾರೈಸಿ ಬೀಳ್ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.