ADVERTISEMENT

ಬ್ಯಾಂಕ್ ಉದ್ಯೋಗಿಗಳಿಗೆ ಲಸಿಕೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2021, 11:42 IST
Last Updated 18 ಮೇ 2021, 11:42 IST

ವಿಜಯಪುರ: ಬ್ಯಾಂಕ್ ಉದ್ಯೋಗಿಗಳಿಗೆ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಬೇಕು ಹಾಗೂ ಬ್ಯಾಂಕುಗಳನ್ನು ವಾರದಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಆಗ್ರಹಿಸಿದೆ.

ಕೊರೊನಾ ಹಳ್ಳಿಗಳತ್ತ ಮುಖಮಾಡಿ ಹಳ್ಳಿಯ ಜನಜೀವನ ಅಸ್ತವ್ಯಸ್ತ ಮಾಡಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಾರ್ಯ ನಿರ್ವಹಿಸಿ ಗ್ರಾಮೀಣ ಜನರಿಗೆ ಮತ್ತು ರೈತರಿಗೆ ಹಣಕಾಸು ಸೇವೆಯನ್ನು ಪೂರೈಸುತ್ತಿದ್ದಾರೆ ಎಣದಯ ಸಂಘ ಹೇಳಿದೆ.

ಗ್ರಾಮೀಣ ಬ್ಯಾಂಕಿನ ಹಲವಾರು ನೌಕರರು ಕೊರೊನಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ನಮ್ಮ ರಕ್ಷಣೆಗಾಗಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ.ಗಾಂಧಿ, ಪದಾಧಿಕಾರಿಗಳಾದ ಶಿವಾಜಿ ಇನಾಮದಾರ, ಸಿ.ಎ. ಗಂಟೆಪ್ಪಗೋಳ, ಸುನೀಲ ನಾಯ್ಕ ಹಾಗೂ ಬಸವರಾಜ ಸರಬಡಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.