ADVERTISEMENT

ವಿಜಯಪುರ | ಜಾನುವಾರು ಜಾತ್ರೆ:  ಜಿಲ್ಲಾಧಿಕಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:53 IST
Last Updated 15 ಜನವರಿ 2026, 2:53 IST
ವಿಜಯಪುರ ನಗರದ ತೊರವಿಯಲ್ಲಿನ ಜಾನುವಾರ ಜಾತ್ರೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಆನಂದ ಕೆ. ಅವರು ಎತ್ತೊಂದನ್ನು ವೀಕ್ಷಿಸಿದರು 
ವಿಜಯಪುರ ನಗರದ ತೊರವಿಯಲ್ಲಿನ ಜಾನುವಾರ ಜಾತ್ರೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಆನಂದ ಕೆ. ಅವರು ಎತ್ತೊಂದನ್ನು ವೀಕ್ಷಿಸಿದರು    

ವಿಜಯಪುರ: ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ತೊರವಿಯಲ್ಲಿ ಆಯೋಜಿಸಿರುವ ಜಾನುವಾರ ಜಾತ್ರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆನಂದ ಕೆ. ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

‘ಈ ಬಾರಿ ಜಾತ್ರೆಗೆ 5,000 ಜಾನುವಾರಗಳು ಬಂದಿದ್ದು, ಈ ಪೈಕಿ ಈವರೆಗೆ 1,500 ಜಾನುವಾರುಗಳು ಮಾರಾಟವಾಗಿವೆ. ಬಹುಮಾನ ವಿತರಿಸಲಾಗುತ್ತದೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಮಾಹಿತಿ ನೀಡಿದರು.  

ಬಹುಮಾನಕ್ಕೆ ಜಾನುವಾರು ಆಯ್ಕೆ ಪ್ರಕ್ರಿಯೆ ನಿಯಮಾನುಸಾರ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಗೋಣಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.