
ಲಕ್ಷ್ಮಣ ನಿಂಬರಗಿ
ವಿಜಯಪುರ: ನಗರಕ್ಕೆ ಜ.9 ರಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಆಗಮಿಸಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವು ದರಿಂದ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳಲು ಸಂಚಾರ ಮಾರ್ಗ ಬದಲಾಯಿಸಿ, ಪರ್ಯಾಯ ಮಾರ್ಗಗಳ ವ್ಯವಸ್ಥೆ ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು: ವಿಜಯ ಪುರ ತಾಲ್ಲೂಕಿನ ಗ್ರಾಮಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ವಿಜಯಪುರಕ್ಕೆ ಬರುವ ಬಸ್ಗಳನ್ನು ಸೋಲಾಪುರ ನಾಕಾ, ಸಿಂದಗಿ ನಾಕಾ, ಮನಗೂಳಿ ನಾಕಾ, ಜಮಖಂಡಿ ನಾಕಾ ಹಾಗೂ ಇಟಗಿ ಪೆಟ್ರೋಲ್ ಪಂಪ್ ಹತ್ತಿರ ನಿಲ್ಲಿಸಲಾಗುವುದು. ಸಾರ್ವಜನಿಕರು ಅಲ್ಲಿಂದ ಬೇರೆ ಬೇರೆ ವಾಹನ ಗಳ ಮೂಲಕ ವಿಜಯಪುರ ಶಹರದಲ್ಲಿ ಒಳಗೆ ಬರುವುದು.
ಸೋಲಾಪೂರ, ಸಿಂದಗಿ ಮತ್ತು ಇಂಡಿ ಕಡೆಯಿಂದ ಬಂದು ವಿಜಯಪುರದಿಂದ ಬೇರೆ ಜಿಲ್ಲೆ/ರಾಜ್ಯಗಳಿಗೆ ಹೋಗುವ ಕೆಸ್ಆರ್ಟಿಸಿ ಹಾಗೂ ಭಾರಿ ಗಾತ್ರದ ವಾಹನಗಳು ಸಿಂದಗಿ ನಾಕಾದಿಂದ ಸ್ಟೇಷನ್ ರೋಡ್ ಮಾರ್ಗವಾಗಿ ನೇರವಾಗಿ ವಿಜಯಪುರ ಶಹರದಲ್ಲಿ ಒಳಗಡೆ ಬರದೇ ಅವುಗಳು ಮನಗೂಳಿ ನಾಕಾ ಮೂಲಕ ಹಾಯ್ದು ಜಲನಗರ/ಮನಗೂಳಿ ಅಗಸಿ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
ಅಥಣಿ, ಕೊಲ್ಹಾರ ಮತ್ತು ಜಮಖಂಡಿ ಕಡೆಯಿಂದ ಬಂದು ವಿಜಯಪುರದಿಂದ ಬೇರೆ ಜಿಲ್ಲೆ/ರಾಜ್ಯಗಳಿಗೆ ಹೋಗುವ ಕೆಸ್ಆರ್ಟಿಸಿ ಹಾಗೂ ಭಾರಿ ಗಾತ್ರದ ವಾಹನಗಳು ಜಮಖಂಡಿ ನಾಕಾದ ಮೂಲಕ ಬಿದನೂರ ಪೆಟ್ರೊಲ್ ಪಂಪ್ - ನಾಯರಾ ಪೆಟ್ರೋಲ್ ಪಂಪ್ -ನವಬಾಗ್ ರೋಡ್ ಮೂಲಕ ಹಾಯ್ದು ಬಸ್ ನಿಲ್ದಾಣಕ್ಕೆ ಬರುವುದು.
ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ: ಸ್ಟೇಷನ್ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗೋಳಗುಮ್ಮಟದಿಂದ ಹಕೀಂ ಚೌಕ್ - ಜೆ.ಎಂ. ರೋಡ್ - ಅಸ್ಟಪೈಲ್ ಬಂಗಲಾ - ಬಾಗಲಕೋಟೆ ಕ್ರಾಸ್ - ಬಸ್ ನಿಲ್ದಾಣಕ್ಕೆ ಬರುವುದು. ಅದೇ ರೀತಿ ಸ್ಟೇಷನ್ ರಸ್ತೆಯಲ್ಲಿ ಇನ್ನೊಂದು ಪರ್ಯಾಯ ಮಾರ್ಗ ಬಡಿಕಮಾನ್ ಕ್ರಾಸ್ - ಜೆ.ಎಂ. ರೋಡ್ - ಅಸ್ಟಪೈಲ್ ಬಂಗಲಾ - ಬಾಗಲಕೋಟೆ ಕ್ರಾಸ್ - ಬಸ್ ನಿಲ್ದಾಣಕ್ಕೆ ಬರುವುದು.
ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್ ಸ್ಥಳಗಳು: ಚೆನ್ನಮ್ಮ ಮೂರ್ತಿಯ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಜೋಡುಗುಮ್ಮಟ ರಸ್ತೆಯಲ್ಲಿ ಮತ್ತು ಹಳೆಯ ತಹಶೀಲ್ದಾರ್ ಕಚೇರಿಯ ರಸ್ತೆಯಲ್ಲಿ ನಿಲ್ಲಿಸುವುದು.
ದರ್ಬಾರ್ ಹೈಸ್ಕೂಲಿನ ಕಾರ್ಯಕ್ರಮಕ್ಕೆ ಬರುವ ವಿ.ವಿ.ಐ.ಪಿ ವಾಹನಗಳನ್ನು ಸ್ಟೇಡಿಯಂ ಮುಂದಿನ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.
ದರ್ಬಾರ್ ಹೈಸ್ಕೂಲಿನ ಕಾರ್ಯ ಕ್ರಮದ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿಗಳ ವಾಹನಗಳನ್ನು ಆಸಾರ್ ಮಹಲ್ ಒಳಗಿನ ಆವರಣದಲ್ಲಿ ಪಾರ್ಕ್ ಮಾಡುವುದು.
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಸ್ಥಳ –ಗೋಳಗುಮ್ಮಟ ಪಾರ್ಕಿಂಗ್ ಸ್ಥಳ, ಪಿಡಬ್ಲೂಡಿ ಕಚೇರಿ ಆವರಣ, ಹಳೆಯ ಐಬಿ, ಪಸಾರಿ ಕಮಾನ ರಸ್ತೆ, ಕರ್ನಾಟಕ ಲೋಕಾಯುಕ್ತ ಕಚೇರಿಯ ಮುಂದುಗಡೆ, ಸ್ಟೇಡಿಯಂ ಮುಂದುಗಡೆ ಇರುವ ಇಂಡಿ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕ್ ಮಾಡುವುದು.
ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಚುರಪಡಿಸಿದ್ದು, ಸಾರ್ವಜನಿಕರು ಇದರ ಬಗ್ಗೆ ಗಮನಹರಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಬಸ್ ಸಂಚಾರ ವ್ಯತ್ಯಯ ನಾಳೆ
ವಿಜಯಪುರ:ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮವು ಜ.9ರಂದು ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಸಂಚಾರ ದಟ್ಟಣೆ ನಿಯಂತ್ರಿಸಲು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಸಾರಿಗೆ ಬಸ್ಸುಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ-ಲಾಗುವುದು.
ಅಂದು ವಿವಿಧ ಮಾರ್ಗಗಳ ಸಾರಿಗೆ ಬಸ್ಸುಗಳನ್ನು ಹೊರವ ಲಯಗಳಿಂದ ಕಾರ್ಯಾಚರಣೆ ಮಾಡಲಾಗುವುದು. ಸೆಟ್ಲೈಟ್ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯಾ ಗುವ ಸಾರಿಗೆ ಬಸ್ಸುಗಳು ಯಥಾಸ್ಥಿತಿ-ಯಲ್ಲಿ ಮುಂದುವರಿಯಲಿದೆ. ಅಂದು ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಮಾರ್ಗದ ನಗರ ಸಾರಿಗೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊ ಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.