ADVERTISEMENT

ಮಕ್ಕಳ ಸಾಗಾಟ; ಐವರು ಮಕ್ಕಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 19:08 IST
Last Updated 24 ಮೇ 2022, 19:08 IST

ವಿಜಯಪುರ: ತಾಯಿಯಿಂದ ಪ್ರತ್ಯೇಕ ವಾದ, ಪೋಷಕರಿಂದ ದೂರ ವಾದ ಐವರು ಮಕ್ಕಳನ್ನು ಸಾಗಾಟ ಮಾಡುತ್ತಿರುವುದನ್ನು ಮಂಗಳವಾರ ಪತ್ತೆಹಚ್ಚಿದ ಮಹಿಳಾ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.

ನಗರದ ಅಥಣಿ ಗಲ್ಲಿ ನಿವಾಸಿಯಾದ ಚಡಚಣ ತಾಲ್ಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಟಾಪ್ ನರ್ಸ್ಜಯಮಾಲಾ ಬಿಜಾಪುರ ಆರೋಪಿ.

‘ಜಯಮಾಲಾ ತನ್ನ ಮನೆಯಲ್ಲಿ ಐದು ವರ್ಷದ ಗಂಡು ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಸಾಕಿದ್ದು, ಉಳಿದಂತೆ ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಬಳಿ ಮೂರು ವರ್ಷದ ಹೆಣ್ಣು ಮಗು, ಅಥಣಿ ಗಲ್ಲಿಯ ಚಂದ್ರಮ್ಮಾ ಮಾದರ ಬಳಿ 11 ತಿಂಗಳ ಹೆಣ್ಣು ಮಗುವನ್ನು ಬಿಟ್ಟಿದ್ದಾಳೆ. ಅಲ್ಲದೆ, ಸೊಲ್ಲಾಪುರ ನಗರದ ಕುಟುಂಬಕ್ಕೆಐದು ವರ್ಷದ ಹೆಣ್ಣು ಮಗುವನ್ನು ಸಾಗಾಟ ಮಾಡಿದ್ದಳು. ಈ ಎಲ್ಲ ಮಕ್ಕಳನ್ನು ರಕ್ಷಣೆ ಮಾಡಿ,ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.