ADVERTISEMENT

ವಿಜಯಪುರ: ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡ ಏಳು ಜನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:23 IST
Last Updated 4 ಜೂನ್ 2020, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಮಹಾರಾಷ್ಟ್ರದ ಮುಂಬೈನಿಂದ ಜೂನ್‌ 1ರಂದು ಜಿಲ್ಲೆಗೆ ಬಂದು, ಬಿ.ಬಿ. ಇಂಗಳಗಿ ಗ್ರಾಮದ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದ ಏಳು ಜನರು ಜೂನ್‌ 3 ರಂದು ಯಾರಿಗೂ ಹೇಳದೇ, ಕೇಳದೇ ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ಬಿ.ಬಿ. ಇಂಗಳಗಿ ಗ್ರಾಮದ ನಿವಾಸಿಗಳಾದ ಬಸಮ್ಮ ಯಾಳವಾರ, ಪ್ರಭಾವತಿ ಯಾಳವಾರ, ಮಂಜುನಾಥ ಯಾಳವಾರ, ರೇಣುಕಾ ನಾಯ್ಕೋಡಿ, ರಾಹುಲ್ ನಾಯ್ಕೋಡಿ, ಸಚಿನ್‌ ನಾಯ್ಕೋಡಿ ಮತ್ತು ತೇಜಸ್ ಯಾಳವಾರ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸದೇ ಜಿಲ್ಲಾಧಿಕಾರಿ ಅವರ ಆದೇಶವನ್ನು ಉಲ್ಲಂಘಿಸಿ ಹೋಗಿರುವುದರಿಂದ ಅವರ ವಿರುದ್ಧ ಕಲಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT