ADVERTISEMENT

300 ಸಂತ್ರಸ್ತರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 15:33 IST
Last Updated 15 ಆಗಸ್ಟ್ 2019, 15:33 IST
ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರು ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರವಾಹ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು
ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರು ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರವಾಹ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು   

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವೈದ್ಯರ ತಂಡವು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪ್ರವಾಹ ಪೀಡಿತ ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.

ಡಾ.ಎಸ್.ಎಸ್.ನಾಗಠಾಣ ನೇತೃತ್ವದ ತಂಡವು ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮಗಳಲ್ಲಿ ಸಂಚರಿಸಿ, ತಪಾಸಣೆ ಕೈಗೊಂಡರು. 300ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.

ಡಾ.ವಿ.ಯು.ಸಿಂದಗಿಕರ, ಡಾ.ಸಮೀತಾ ರೆಡ್ಡಿ, ಡಾ.ಶ್ರುತಿ ಬಾಗಲಕೋಟ, ಡಾ.ಗಿರಿಜಾ ಎಚ್., ಡಾ.ಶ್ರೀದೇವಿ ಎಸ್.ಎಚ್.,ಡಾ.ಎಸ್.ಎಸ್.ದೇವರಮನಿ, ಡಾ.ಸಿದ್ದಾರ್ಥ, ಡಾ.ಅನುಷ್ಕಾ, ಡಾ.ಕೌಸರ್, ಡಾ.ಶ್ರೀಕಾಂತ, ಡಾ.ಪುನೀತ್ ಪಾಟೀಲ,ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.