ADVERTISEMENT

ಲೋಕಸಭಾ ಚುನಾವಣೆ: ಏಕಗವಾಕ್ಷಿ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 14:35 IST
Last Updated 29 ಮಾರ್ಚ್ 2024, 14:35 IST

ಇಂಡಿ: ಲೋಕಸಭಾ ಚುನಾವಣೆಯಲ್ಲಿ ವಿವಿಧ ಅನುಮತಿಗಳನ್ನು ನೀಡಲು ಏಕ ಗವಾಕ್ಷಿ ತಂಡ ರಚಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.

ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಡೆಸುವ ಪ್ರಚಾರದ ಅಂಗವಾಗಿ ಅನುಮತಿಗಾಗಿ ಕೋರುತ್ತಿರುವ ಪ್ರಸ್ತಾವ ಪರಿಶೀಲಿಸಿ ಏಕ ಗವಾಕ್ಷಿ ಕಾರ್ಯ ಮಾಡಲಿದೆ.

ಕಂದಾಯ ಇಲಾಖೆಯ ಎಸ್.ಆರ್.ಮುಜಗೊಂಡ, ಪೊಲೀಸ್ ಇಲಾಖೆಯ ಪಿ.ಎ.ಅರವತ್ತು, ಪುರಸಭೆಯ ಎಲ್.ಎಸ್.ಸೋಮನಾಯಕ, ತಾ.ಪಂ ವೈ.ಡಿ.ಮಾದರ, ಅಗ್ನಿ ಶಾಮಕ ಇಲಾಖೆಯ ಮುಬಾರಕ ಇಂಡಿಕರ, ಲೋಕೋಪಯೋಗಿ ಇಲಾಖೆಯ ಷಣ್ಮುಖ ಚಂದನಸೇವೆ, ಹೆಸ್ಕಾಂ ಇಲಾಖೆಯ ಶರಣಪ್ಪ ಕಟ್ಟಿಮನಿ, ಸಾರಿಗೆ ಇಲಾಖೆಯ ಸಂಗನಗೌಡ ಬಿರಾದಾರ, ಆರ್.ಟಿ.ಒ ಇಲಾಖೆಯ ಕೆ.ಸುರೇಶಕುಮಾರ ತಂಡದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.