ADVERTISEMENT

ಜಮೀನು ಅತಿಕ್ರಮಣ: ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:41 IST
Last Updated 10 ಫೆಬ್ರುವರಿ 2026, 4:41 IST
ಅತೀಕ್ರಮಿಸಿಕೊಂಡ ಜಮೀನಿಗೆ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ವೀರೇಶನಗರ ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಅತೀಕ್ರಮಿಸಿಕೊಂಡ ಜಮೀನಿಗೆ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ವೀರೇಶನಗರ ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.   

ಮುದ್ದೇಬಿಹಾಳ: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವೇಳೆ ರೈತರ ಜಮೀನು ಅತಿಕ್ರಮಿಸಿಕೊಂಡು ಕಾಂಪೌಂಡ್‌ ನಿರ್ಮಿಸಿಕೊಂಡು 3 ವರ್ಷಗಳಿಂದ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ನಮಗೆ ₹45 ಸಾವಿರ ನಷ್ಟವಾಗಿದೆ. ಶೀಘ್ರವೇ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಮೀಪದ ವೀರೇಶನಗರದ ಸಂತ್ರಸ್ತ ರೈತ ಕುಟುಂಬ ಮತ್ತು ಗ್ರಾಮಸ್ಥರು ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಾಲತವಾಡ ಪ.ಪಂಗೆ ಸಂಬಂಧಿಸಿದ ಘನತ್ಯಾಜ ವಿಲೇವಾರಿ ಘಟಕ ನಿರ್ಮಾಣದ ವೇಳೆ ಕೆಲ ರೈತರು ಜಮೀನು ಅತಿಕ್ರಮಿಸಿಕೊಂಡಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ ಹಾಗೂ ಕಂದಾಯ ಮತ್ತು ಪೋಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತ ರೈತರು ಹೇಳಿದರು.

ಮಹಾಂತೇಶ ಪಟ್ಟಣದ, ಸಂಗಣ್ಣ ಹವಾಲ್ದಾರ, ಈರಪ್ಪ ಪತ್ತೇಪೂರ, ಬಸಪ್ಪ ಪತ್ತೇಪೂರ, ಸಂಗಯ್ಯ ಡಂಬಳ, ಬಸಪ್ಪ ಹವಾಲ್ದಾರ್, ಶಿವರುದ್ರಯ್ಯ ಹಿರೇಮಠ, ಶಾಂತಪ್ಪ ಭಂಗಿ, ಈರಪ್ಪ ಇಂದವಾರ, ಯಮನಪ್ಪ ಕೋಟಿ,ಜಗದೇವಪ್ಪ ಕೋಟಿ, ಮುದಕಪ್ಪ ಕಂಬಳಿ,ಸಂಗಪ್ಪ ಪೂಜಾರಿ, ಮೌನೇಶ ಗೌಂಡಿ,ಪ್ರಭು ಪತ್ತೇಪೂರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.