ವಿಜಯಪುರ: ಹಸಿರು ನಮ್ಮೆಲ್ಲರ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಪರಿಸರ ಪ್ರೇಮಿಗಳ ಘೋಷ ವಾಕ್ಯಗಳನ್ನು ಮುಂಚಿನಿಂದ ಕೇಳುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿಗೆ ಕೊರೊನಾದಂತಹ ಸಂಕಷ್ಟದಲ್ಲಿ ಹಣ ಕೊಟ್ಟರು ಆಮ್ಲಜನಕ ಸಿಗದೇ ಅನೇಕರು ಸಾವನ್ನಪ್ಪಿದ ಘಟನೆಗಳು ಗಮನಿಸಿದಾಗ ಪ್ರಕೃತಿಯಿಂದ ಉಚಿತವಾಗಿ ನಮ್ಮೆಲ್ಲರಿಗೆ ಆಗುತ್ತಿರುವ ಲಾಭಗಳನ್ನು ತಿಳಿಯಬಹುದಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು.
ನಾಗಠಾಣ ಮತಕ್ಷೇತ್ರದ ಜುಮನಾಳದ ಸರ್ಕಾರಿ ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ಅವರು ಮಾತನಾಡಿದರು.
ಪರಿಸರದ ಉಳಿವಿಗಾಗಿ ಪಣ ತೊಟ್ಟು, ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ಸಸಿಗಳನ್ನು ನೆಟ್ಟು ಈ ಭೂಮಂಡಲನ್ನು ಹಸಿರು ಮಾಡೋಣ, ಹಸಿರು ನಮ್ಮೆಲ್ಲರ ಉಸಿರು ಎಂದರು.
ಶರಣ ಮುತ್ಯಾ ಪೂಜಾರಿ, ರಮೇಶ ವಗ್ಗೆ, ಸುಭಾಶ ಚಲವಾದಿ, ಸಂಜು ಕಬಾಡೆ, ಸುನೀಲ ಕೋರಿ, ಸುರೇಶ ಕೊಲಕಾರ, ಶರಣಯ್ಯ ಮಠಪತಿ, ಸಂಜಯ ಬಿಷೆ, ಸಾಗರ ಕಾಪ್ಸೆ, ರಾಕೇಶ ಕೋಟಿ, ಭೀಮಾಶಂಕರ ಹೊನ್ನುಟಗಿ, ಪಯಾಜ ಜಂಬಗಿ, ಶ್ರೀಶೈಲ ಮಮದಾಪುರ, ಈರಣ್ಣ ಅಮರಪ್ಪಗೊಳ, ಸಾಬು ಕಂಬಾರ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.