ADVERTISEMENT

ವಿಜಯಪುರ | ರಾಜ್ಯೋತ್ಸವ ಸನ್ಮಾನಕ್ಕೆ ಜಿಲ್ಲೆಯ 25 ಸಾಧಕರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:17 IST
Last Updated 31 ಅಕ್ಟೋಬರ್ 2024, 14:17 IST

ವಿಜಯಪುರ: ಜಿಲ್ಲೆಯ 25 ಸಾಧಕರನ್ನು ಕರ್ನಾಟಕ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ತಿಳಿಸಿದ್ದಾರೆ.

ಶಿಲ್ಪಕಲಾ ಕ್ಷೇತ್ರದಲ್ಲಿ ಷಣ್ಮುಖಪ್ಪ ಪತ್ತಾರ, ಚಿತ್ರಕಲಾ ಕ್ಷೇತ್ರದಲ್ಲಿ ಹುಸೇನ ಮಕಾನದಾರ, ಬಯಲಾಟ ಕ್ಷೇತ್ರದಲ್ಲಿ ಯಲ್ಲಪ್ಪ ಗೊಂದಳಿ, ಜಾನಪದ ಕ್ಷೇತ್ರದಲ್ಲಿ ಆದವ್ವ ಕದ್ರಿ, ಸಿದ್ದಪ್ಪ ಆಲಗೊಂಡ (ಜೋಗತಿ) ಹಾಗೂ ಶಾಂತಾಬಾಯಿ ಲಚ್ಚು ನಾಯಕ, ಸಮಾಜ ಸೇವೆ ಕ್ಷೇತ್ರದಲ್ಲಿ ಬಸವರಾಜ  ಪಾಟೀಲ, ಮಹಾವೀರ ಸಗರಿ, ಚೆನ್ನಬಸಯ್ಯ  ಹಿರೇಮಠ, ಶ್ರೀಕಾಂತ ಬಿರಾದಾರ, ಮಲ್ಲುಬಿದರಿ ಹಾಗೂ ಸುರೇಶ ಗೊಣಸಗಿ ಅವರನ್ನು ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಶಿವಾನಂದ ಜಂಗಿನಮಠ ಹಾಗೂ ಡಾ.ಬಾಬು ಬಸಪ್ಪ ಕುಚನೂರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಸೊನ್ನದ, ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ ಹಾಗೂ ಶ್ರೀಶೈಲ ಕೊಟ್ಟಲಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಿಂದುರಾವ್‌ ನಾಡಗೌಡ ಹಾಗೂ ದಾಕ್ಷಾಯಿಣಿ ಬಿರಾದಾರ, ರಂಗಭೂಮಿ ಕ್ಷೇತ್ರದಲ್ಲಿ ಮಹಾದೇವಪ್ಪ ಹುಣಶ್ಯಾಳ, ಶಿಕ್ಷಣ ಕ್ಷೇತ್ರದಲ್ಲಿ ಡಾ. ಮಲ್ಲಿಕಾರ್ಜುನ ವಡ್ಡರ ಹಾಗೂ ಶಿವಕುಮಾರ ಬಾಗಿ, ಸಂಗೀತ ಕ್ಷೇತ್ರದಲ್ಲಿ ಶ್ರೀಕಾಂತ ಬಡಿಗೇರ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ ಅವಲೇಸಾ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ನ.1ರಂದು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.