ವಿಜಯಪುರ: ತಾಲ್ಲೂಕಿನ ಶಿರನಾಳ ಗ್ರಾಮದ ಶ್ರೀ ಸದ್ಗುರು ಭೀಮದಾಸ ಮಹಾರಾಜರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈಚೆಗೆ ಜರುಗಿದ ಕನ್ನೂರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ, ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ಥ್ರೋಬಾಲ್ ಟೂರ್ನಿಯಲ್ಲಿ ಪ್ರತೀಕ್ಷಾ ತಳವಾರ, ಸ್ನೇಹಾ ನಾಯಕ, ಸಾಕ್ಷಿ ಪಾಟೀಲ, ಜ್ಞಾನಶ್ರೀ ಕಾಂಬಳೆ, ಮಧುಶ್ರೀ ಶೇಗುಣಸಿ, ನಂದಿತಾ ಜಂಬಗಿ, ಐಶ್ವರ್ಯ ಬೂದಿಹಾಳ, ರಮ್ಯ ಬಿರಾದಾರ, ಪವಿತ್ರಾ ಗೋರಗುಂಡಗಿ, ಖುಷಿ ವಾಗ್ಮೊರೆ, ಅಕ್ಷತಾ ಲಮಾಣಿ, ದಿವ್ಯ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ಥ್ರೋಬಾಲ್ ಟೂರ್ನಿಯಲ್ಲಿ ದರ್ಶನ ಧರ್ಮದ, ಕರಣ್ ನಾಯಕ, ನಟರಾಜ ತಳವಾರ, ಸುದೀಪ ಮಸಳಿ, ನವನೀತ ವನಕಿಹಾಳಮಠ, ಪ್ರಜ್ವಲ್ ಸಿಂಧೆ, ಸಮೀರ ತಾಳಿಕೋಟಿ, ರಾಘವೇಂದ್ರ ನಾಯಕ, ಸೌರಭ ಪಡಗಾನೂರ, ರೋಹಿತ ಚವ್ಹಾಣ, ಆದಿತ್ಯ ಬೆಟಗೇರಿ, ಗಿರೀಶ ನಂದೂರ ಪ್ರಥಮ, ಅಡೆತಡೆ ಓಟದಲ್ಲಿ ವೈಷ್ಣವಿ ಜಾಧವ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಭಾಗ ಮಟ್ಟಕ್ಕೆ ಆಯ್ಕೆ: ವಿ.ಬಿ.ದರಬಾರ ಪ್ರೌಢಶಾಲೆಯಲ್ಲಿ ಈಚೆಗೆ ಜರುಗಿದ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತನಾಗಿರುವ ಆಶಿಷ್ ನರೇಂದ್ರಸಿಂಗ್ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಆಡಳಿತಾಧಿಕಾರಿ ಸುನೀಲ ನಾವಲಗಿ, ಅಮರೇಶ ಅಳಗುಂಡಗಿ, ಶಾಲಾ ಸಂಯೋಜಕ ಎನ್.ಜಿ.ಯರನಾಳ, ಮುಖ್ಯಶಿಕ್ಷಕ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೀತಿ ಕಾಳೆ, ಸಂಗಮೇಶ ಆಲಮೇಲ, ಶ್ರೀಗಿರಿ ಉಪಾಧ್ಯಯ, ಡಿ.ಎಂ. ಶಿಂಧೆ, ಮಹೇಶ ಸಂಗಮ, ದಾನಮ್ಮ ವಾಲಿ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.