ADVERTISEMENT

ವಿಜಯಪುರ: ಗುಡುಗು ಸಹಿತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:57 IST
Last Updated 8 ಸೆಪ್ಟೆಂಬರ್ 2020, 15:57 IST
ಹೊಳೆಯಲ್ಲ ನೀರಿನ ರಸ್ತೆ.... ವಿಜಯಪುರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಯ ಪರಿಣಾಮ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಟೇಡಿಯಂ ಎದುರು ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ನೀರು ನಿಂತಿರುವುದು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಹೊಳೆಯಲ್ಲ ನೀರಿನ ರಸ್ತೆ.... ವಿಜಯಪುರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಯ ಪರಿಣಾಮ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಟೇಡಿಯಂ ಎದುರು ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ನೀರು ನಿಂತಿರುವುದು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ತಡ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ವಿಜಯಪುರ ನಗರದಲ್ಲಿ ಸುಮಾರು ಒಂದು ತಾಸು ಸುರಿದ ಭಾರೀ ಮಳೆಯಿಂದ ರಸ್ತೆ ಮೇಲೆ ನೀರು ಉಕ್ಕಿ ಉರಿಯಿತು.

ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಟೇಡಿಯಂ ಎದುರು ನಿರ್ಮಾಣ ಹಂತದಲ್ಲಿರುವ ಶಾಪೇಟೆ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಬೈಕುಗಳು ನೀರಿನಲ್ಲಿ ಮುಳುಗಿದವು. ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು.

ADVERTISEMENT

ಶಿಖರಖಾನೆ ರಸ್ತೆಯಲ್ಲೂ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ನಗರ ಬಹುತೇಕ ಗುಂಡಿಬಿದ್ದು ಹದಗೆಟ್ಟಿರುವ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಯಿತು.

ಮಳೆ ವಿವರ:ಬಸವನ ಬಾಗೇವಾಡಿ 26.4 ಮಿ,ಮೀ. ಮಳೆಯಾಗಿದೆ.ಮನಗೂಳಿ 32.2, ಆಲಮಟ್ಟಿ 23.5, ಹೂವಿನ ಹಿಪ್ಪರಗಿ 3, ಮಟ್ಟಿಹಾಳ 4, ನಾಗಠಾಣ 6.2, ಭೂತನಾಳ 46.8, ಹಿಟ್ನಳ್ಳಿ 3.4, ಕುಮಟಗಿ 12.8, ಅಗರಖೇಡ 1, ಹಲಸಂಗಿ 27, ಚಡಚಣ 3, ಝಳಕಿ 6.1, ಸಿಂದಗಿ 18, ಆಲಮೇಲ 2.8, ರಾಮನಹಳ್ಳಿ 1.2, ದೇವರ ಹಿಪ್ಪರಗಿ 1.8 ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.