ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 3:42 IST
Last Updated 4 ಜೂನ್ 2020, 3:42 IST
ವಿಜಯಪುರ ನಗರದ ಬಸ್‌ ನಿಲ್ದಾಣದ ಎದುರಿನ ವೃತ್ತದಲ್ಲಿ ಅಳವಡಿಸಿದ್ದ ಹಸಿರು ಪರದೆ ಬುಧವಾರ ಬೀಸಿದ ಬಿರುಗಾಳಿಗೆ ಹರಿದು ಹೋಗಿದೆ–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಬಸ್‌ ನಿಲ್ದಾಣದ ಎದುರಿನ ವೃತ್ತದಲ್ಲಿ ಅಳವಡಿಸಿದ್ದ ಹಸಿರು ಪರದೆ ಬುಧವಾರ ಬೀಸಿದ ಬಿರುಗಾಳಿಗೆ ಹರಿದು ಹೋಗಿದೆ–ಪ್ರಜಾವಾಣಿ ಚಿತ್ರ   

ವಿಜಯಪುರ: ‘ನಿಸರ್ಗ’ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಬಿರುಗಾಳಿಯ ಅಬ್ಬರ ಜೋರಾಗಿತ್ತು.

ಬೆಳಿಗ್ಗೆಯಿಂದ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಚದುರಿದಂತೆ ಜಿಟಿಜಿಟಿ ಮಳೆಯಾಯಿತು.

ವಿಜಯಪುರ ನಗರದ ಬಸ್‌ ನಿಲ್ದಾಣದ ಎದುರಿನ ವೃತ್ತದಲ್ಲಿ ಬೇಸಿಗೆ ಬಿಸಿಲಿನಿಂದ ರಕ್ಷಣೆಗಾಗಿ ಮಹಾನಗರ ಪಾಲಿಕೆ ಅಳವಡಿಸಿದ್ದ ಹಸಿರು ಪರದೆ ಹರಿದುಹೋಯಿತು. ಉಳಿದಂತೆ ಗಾಳಿಯ ಅಬ್ಬರಕ್ಕೆ ರಸ್ತೆಯಲ್ಲಿ ದೂಳು ಮುಖಕ್ಕೆ ರಾಚುತ್ತಿತ್ತು. ದಿನಪೂರ್ತಿ ಶೀತಮಯ ವಾತಾವರಣ ಇತ್ತು.

ADVERTISEMENT

ತಾಳಿಕೋಟೆಯಲ್ಲಿ ಮಧ್ಯಾಹ್ನ 15 ನಿಮಿಷಗಳ ಕಾಲ ಸಾಧಾರಣ ಮಳೆ ಸುರಿಯಿತು.

ಮಂಗಳವಾರದ ಮಳೆ ವಿವರ

ಬಸವನ ಬಾಗೇವಾಡಿಯಲ್ಲಿ 9.2 ಮಿ.ಮೀ. ಮಳೆಯಾಗಿದೆ. ಹೂವಿನ ಹಿಪ್ಪರಗಿ 7.2, ನಾಗಠಾಣ 2, ನಾದ ಬಿ.ಕೆ 3.2, ಹೊರ್ತಿ 5.8, ಚಡಚಣ 0.4, ಝಳಕಿ 6, ಮುದ್ದೇಬಿಹಾಳ 8, ಢವಳಗಿ 4, ದೇವರ ಹಿಪ್ಪರಗಿ 9.4, ಕೊಂಡಗೂಳಿ 2.1 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.