ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಆಶ್ರಯ ಬಡಾವಣೆಯ ಹಳೆಯ ಬಾವಿಗೆ ಬಟ್ಟೆ ತೊಳೆಯಲು ಇಳಿದಿದ್ದ ಇಬ್ಬರು ಬಾಲಕರು ಕಾಲು ಜಾರಿ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.
ಪ್ರೇಮ್ ಸುನೀಲ ಹಡಪದ (14) (ತೇಲಂಗಿ) ಹಾಗೂ ಪುನೀತ್ ಸುನೀಲ ಹಡಪದ (10) (ತೇಲಂಗಿ) ಮೃತರು.
ವಿಷಯ ತಿಳಿದ ಮಹಿಬೂಬನಗರದ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಬಾವಿಗೆ ಇಳಿದು ಎರಡೂ ಮಕ್ಕಳ ಶವಗಳನ್ನು ಹೊರ ತೆಗೆದರು. ಅವರಿಗೆ ಪುರಸಭೆಯ ಸದಸ್ಯ ಶಿವು ಶಿವಪೂರ, ಮಾಜಿ ಸದಸ್ಯ ಕಾಮರಾಜ ಬಿರಾದಾರ ಹಾಗೂ ಸ್ಥಳೀಯ ರಾಮು ಪೂಜಾರಿ ನೆರವಾದರು.
ಘಟನೆ ಕುರಿತು ಬಾಲಕರ ತಂದೆ ಸುನೀಲ ಹಡಪದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.