ADVERTISEMENT

ವಿಜಯಪುರದಲ್ಲಿ ಎರಡು ಮನೆ ಕಳವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 15:48 IST
Last Updated 9 ಆಗಸ್ಟ್ 2022, 15:48 IST

ವಿಜಯಪುರ: ಇಲ್ಲಿನಮಲ್ಲಿಕಾರ್ಜುನ ನಗರ ಹಾಗೂ ಶ್ರೀನಗರದಲ್ಲಿ ಎರಡು ಮನೆಗಳಲ್ಲಿ ಮಂಗಳವಾರ ನಸುಕಿನಲ್ಲಿ ಕಳುವಾಗಿದೆ.

ಮಲ್ಲಿಕಾರ್ಜುನ ನಗರದ ಮಲ್ಲನಗೌಡ ಬಿರಾದಾರ ಎಂಬುವವರ ಮನೆಯಬಾಗಿಲಿಗೆ ಹಾಕಿದ್ದ ಕೊಂಡಿಯನ್ನು ಕಿಟಕಿ ಮೂಲಕ ತೆಗೆದು ಒಳಪ್ರವೇಶಿಸಿರುವ ಕಳ್ಳರು, ಮನೆಯಲ್ಲಿದ್ದ 120 ಗ್ರಾಂ ಚಿನ್ನಾಭರಣ, ₹ 1 ಲಕ್ಷ ನಗದು ಹಾಗೂಮನೆ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್‌ ಕಾರನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಶ್ರೀನಗರದಲ್ಲಿಡಾ.ಜಿ.ಎಂ. ಚೌಗಲೆ ಎಂಬುವವವರ ಮನೆಯಕಿಟಕಿ ಗ್ರಿಲ್ ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ 20 ಗ್ರಾಂ ಚಿನ್ನ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ.

ADVERTISEMENT

ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರ ಬಂಧನಕ್ಕೆ ಆದರ್ಶನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.