ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಆರಂಭವಾದ ಮಳೆ ಭಾನುವಾರ ದಿನವಿಡೀ ಧಾರಾಕಾರವಾಗಿ ಸುರಿಯಿತು.
ಜಿಲ್ಲೆಯಾದ್ಯಂತ ಕರಿಮೋಡಗಳು ದಟ್ಟೈಸಿದ್ದವು. ಆಗಾಗ ಬಿರುಸಿನ ಗಾಳಿಯೊಂದಿಗೆ ಮಳೆ ಸುರಿಯಿತು. ದಿನವಿಡೀ ಮಲೆನಾಡ ವಾತಾವರಣ ಕಂಡುಬಂದಿತು. ಅಧಿಕ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಜೊತೆಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೊಳೆಯುವ ಭೀತಿ ಎದುರಾಗಿದೆ.
ಬಸವನ ಬಾಗೇವಾಡಿ 24.3 ಮಿ.ಮೀ, ಮನಗೂಳಿ 21.2, ಆಲಮಟ್ಟಿ 24.8, ಹೂವಿನ ಹಿಪ್ಪರಗಿ 44.6, ಅರೇಶಂಕರ 40.2, ಮಟ್ಟಿಹಾಳ 16.4, ವಿಜಯಪುರ 14, ನಾಗಠಾಣ 6.1, ಭೂತನಾಳ 8, ಹಿಟ್ನಳ್ಳಿ 13.2, ತಿಕೋಟಾ 12, ಮಮದಾಪೂರ 16.4, ಕುಮಟಗಿ 1.4, ಕನ್ನೂರ 5.9, ಬಬಲೇಶ್ವರ 19.4, ಇಂಡಿ 7.5, ನಾದ ಬಿ.ಕೆ 7.2, ಅಗರಖೇಡ 11.4, ಹೊರ್ತಿ 2.4, ಹಲಸಂಗಿ 7, ಚಡಚಣ 4, ಝಳಕಿ 4.3, ಮುದ್ದೇಬಿಹಾಳ 10, ನಾಲತವಾಡ 32.8, ತಾಳಿಕೋಟಿ 27.2, ಢವಳಗಿ 34, ಸಿಂದಗಿ 26.4, ಆಲಮೇಲ 14.2, ಸಾಸಾಬಾಳ 5.2, ರಾಮನಹಳ್ಳಿ 15.5, ಕಡ್ಲೇವಾಡ 16, ದೇವರ ಹಿಪ್ಪರಗಿ 15.4, ಕೊಂಡಗೂಳಿ 30.4 ಮಿ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.