ADVERTISEMENT

ಲಯನ್ಸ್‌ ಪರಿವಾರದ ವಲಯ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:55 IST
Last Updated 29 ಸೆಪ್ಟೆಂಬರ್ 2022, 6:55 IST
ವಿಜಯಪುರ ಲಯನ್ಸ್‌ ಪರಿವಾರದ ವತಿಯಿಂದ ನಡೆದ ವಲಯ ಮಟ್ಟದ ಪ್ರಥಮ ಸಲಹಾ ಸಭೆಯಲ್ಲಿ ಸಾಧಕರನ್ನು ಡಾ.ಬಾಬುರಾಜೇಂದ್ರ ನಾಯಿಕ ಸನ್ಮಾನಿಸಿದರು
ವಿಜಯಪುರ ಲಯನ್ಸ್‌ ಪರಿವಾರದ ವತಿಯಿಂದ ನಡೆದ ವಲಯ ಮಟ್ಟದ ಪ್ರಥಮ ಸಲಹಾ ಸಭೆಯಲ್ಲಿ ಸಾಧಕರನ್ನು ಡಾ.ಬಾಬುರಾಜೇಂದ್ರ ನಾಯಿಕ ಸನ್ಮಾನಿಸಿದರು   

ವಿಜಯಪುರ:ಲಯನ್ಸ್‌ ಪರಿವಾರದ ಮುಂಬರುವ ದಿನಗಳಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಂತೆ ಡಾ.ಬಾಬುರಾಜೇಂದ್ರ ನಾಯಿಕ ಸಲಹೆ ನೀಡಿದರು.

ನಗರದ ಅಪ್ಸರಾ ಟಾಕೀಸ್‌ನಲ್ಲಿ ಲಯನ್ಸ್‌ ಪರಿವಾರದ ವತಿಯಿಂದ ವಲಯ ಮಟ್ಟದ ಪ್ರಥಮ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿಇಂಡಿ, ಸಿಂದಗಿ, ಮುದ್ದೇಬಿಹಾಳ, ಬಾಗಲಕೋಟೆ, ವಿಜಯಪುರದ ಎಲ್ಲ ಲಯನ್ಸ್ ಕ್ಲಬ್‌ ಗಳ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಕ್ಲಬ್‌ನ ಸದಸ್ಯರು ಭಾಗವಹಿಸಿದ್ದರು. ಎಲ್ಲ ಕ್ಲಬ್‌ಗಳ ಕಾರ್ಯ ಚಟುವಟಿಕೆಗಳ ಅವಲೋಕನ ನಡೆಯಿತು.

ADVERTISEMENT

ವಿಭಾಗ ಅಧ್ಯಕ್ಷ ಲಯನ್ ರಾವಸಾಹೇಬ್ ದೇಸಾಯಿ ಮಾರ್ಗದರ್ಶನ ನೀಡಿದರು.

ರಾಜ್ಯ ಪ್ರಶಸ್ತಿ ವಿಜೇತ ಉಪನ್ಯಾಸಕ ಎಂ.ಬಿ. ರಜಪುತ, ವಿಶೇಷ ಸಾಧನೆಗೆ ಶ್ರವಣಕುಮಾರ ಮಹೇಂದ್ರಕರ, ಡಾ.ಅಶೋಕುಮಾರ ಜಾಧವ್ ಅವರನ್ನು ಸನ್ಮಾನಿಸಲಾಯಿತು.

ಫಯಾಜ್‌ ಕಲಾದಗಿ, ನೆಹರು ಪೋರವಾಲ, ಸಂಜಯ ಓಸ್ವಾಲ, ರಾಜೇಶ್ ಗಾಯಕವಾಡ, ಸೋಮಶೇಖರ ರಾಠೋಡ, ವಾಲು ಚವ್ವಾಣ, ಛಾಯಾ ಮಸಿಯವರ, ಮಹಾಂತಮಠ, ಉಷಾ ರಾವ್, ರಾಜೇಶ್ವರಿ ಲದವಾ, ಡಾ.ಎಂ.ಬಿ. ಬಿರಾದಾರ, ಡಾ.ಅಶೋಕ ಜಾಧವ್, ಡಾ.ಬಾಬು ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.