ADVERTISEMENT

ಜಗಜೀವನರಾಂ ಭಾವಚಿತ್ರ ಅನಾವರಣ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:32 IST
Last Updated 31 ಮಾರ್ಚ್ 2018, 7:32 IST
ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಕುರಿಹಾಳ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಯುವ ಮುಖಂಡ ಮಾಣಿಕರಡ್ಡಿ ಕುರಕುಂದಿ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರ ಅನಾವರಣಗೊಳಿಸಿದರು
ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಕುರಿಹಾಳ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಯುವ ಮುಖಂಡ ಮಾಣಿಕರಡ್ಡಿ ಕುರಕುಂದಿ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರ ಅನಾವರಣಗೊಳಿಸಿದರು   

ಯಾದಗಿರಿ: ‘ಡಾ.ಬಾಬು ಜಗಜೀವನ ರಾಂ ದೇಶ ಕಂಡ ಅಪ್ರತಿಮ ಜನನಾಯಕ ರಾಗಿದ್ದರು’ ಎಂದು ಕಾಂಗ್ರೆಸ್ ಯುವ ಮುಖಂಡ ಮಾಣಿಕರಡ್ಡಿ ಕುರಕುಂದಿ ಹೇಳಿದರು.

ಶಹಾಪುರ ತಾಲ್ಲೂಕಿನ ಕುರಿಹಾಳದಲ್ಲಿ ಗುರುವಾರ ಡಾ.ಬಾಬು ಜಗಜೀವನರಾಮ ಯುವಕ ಸಂಘ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಡಾ.ಬಾಬು ಜಗಜೀವನರಾಂ ಹೋರಾಡಿದ್ದಲ್ಲದೇ ಸ್ವಾತಂತ್ರ್ಯ ನಂತರದಲ್ಲಿ ದಲಿತರಿಗೆ, ಹಿಂದುಳಿದವರಿಗೆ ನ್ಯಾಯ ಒದಗಿಸುವ ಮೂಲಕ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಜೀವನ ಆದರ್ಶನಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಜಗಜೀವನರಾಂ ಅವರ ಆದರ್ಶ ತತ್ವಗಳನ್ನು ಪಾಲನೆ ಮಾಡಿ ನಮ್ಮಂತಹ ಯುವಕರು ಸರ್ಕಾರದ ಯೋಜನೆಗಳ ಲಾಭ ದುರ್ಬಲ ವರ್ಗದವರಿಗೆ ತಲುಪಿಸಿ ದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿ ದಂತಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಪ್ಪ ಬಸವಂತಪುರ, ಮುಖಂಡರಾದ ಶಂಕ್ರಪ್ಪ ಶ್ಯಾಣನೋರ್, ಶರಣಪ್ಪ ಕಡಗೂಡ, ಸೊಪಣ್ಣ ಸಗರ, ವಾಸುದೇವ, ರುದ್ರಪ್ಪ ಹುಲಿಮನಿ, ಮೋನಪ್ಪ ಹಳಿಗೇರಾ, ಹಯ್ಯಾಳಪ್ಪ ದೋರನಹಳ್ಳಿ, ಚನ್ನಪ್ಪಗೌಡ ಪೊಲೀಸ್‌ ಪಾಟೀಲ, ಮಲ್ಲಣ್ಣ ಕೌಳೂರು, ಮಲ್ಲಯ್ಯ ಗುತ್ತೇದಾರ, ದೇವಿಂದ್ರಪ್ಪ ಬಡಿಗೇರ, ರಾಮಪ್ಪ ಭಂಡಾರಿ, ಪರಶುರಾಮ, ಹಣಮಂತ, ಮಾನಿಶಪ್ಪ, ಸಾಬಣ್ಣ ತೆಳಿಗೇರಿ, ಬಸವರಾಜ ಪೂಜಾರಿ, ಭೀಮಣ್ಣ ಕಾಡಂಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.