ADVERTISEMENT

ಯಾರನ್ನು ನೇಮಿಸಬೇಕು: ಸರ್ಕಾರಕ್ಕೆ ಪತ್ರ

ಭೀಮರಾಯನಗುಡಿ ಸಿ.ಇ ಕುರ್ಚಿಗೆ ಕಾದಾಟ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 8:13 IST
Last Updated 11 ಮಾರ್ಚ್ 2014, 8:13 IST

ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ  ಕಚೇರಿಯ ಮುಖ್ಯ ಎಂಜಿನಿಯರ್‌ ಆಗಿ ಯಾರನ್ನು ನೇಮಿಸಬೇಕು? ಎಂದು ಕೆಬಿಜೆಎನ್‌ಎಲ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್‌ ಮೋಹನ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾ­ಖೆಯ ಸರ್ಕಾರದ ಪ್ರಧಾನ ಕಾರ್ಯ­ದರ್ಶಿಯವರಿಗೆ ಪತ್ರ ಬರೆದು ಕೋರಿದ್ದಾರೆ.

ಪ್ರಭಾರವನ್ನು ಮುಖ್ಯ ಎಂಜಿನಿಯರ್‌ ಪ್ರಮೋದರಡ್ಡಿ ಪಾಟೀಲ್‌ ‘ಸ್ವಯಂ ಗ್ರಹಣ’  ಮಾಡಿರುವುದು. ಸುಪ್ರೀಂ ಕೋರ್ಟ್‌ ಆದೇಶದಂತೆ  ಬಿ.ವೈ.ಜುಮ್ಮ­ನಾಳ ಅವರನ್ನು ಯಥಾಸ್ಥಿತಿ ಮುಂದು­ವರೆಸುವ ತೀರ್ಪಿನ ಕುರಿತು ನಿರ್ದೇಶನ ಹಾಗೂ ಭೀಮರಾಯನಗುಡಿಯಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಯಾರನ್ನು ಮುಂದುವರೆಸಬೇಕು ಕುರಿತು ತುರ್ತಾಗಿ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಸರ್ಕಾರದ ಆದೇಶ ಹಾಗೂ ನಿರ್ದೇ­ಶನಕ್ಕಾಗಿ ಎಲ್ಲರ ಕಣ್ಣು ವಿಧಾನ­ಸೌಧ­ದತ್ತ ನೆಟ್ಟಿದೆ.

ಹುದ್ದೆಯಲ್ಲಿ ಯಾರು ಮುಂದುವರೆ­ಯಬೇಕು? ಎಂಬ ಸ್ಪಷ್ಟವಾದ ನಿರ್ದೇ­ಶನವಿಲ್ಲದ ಕಾರಣ ಸೋಮವಾರ ಇಬ್ಬರು ಕಚೇರಿಗೆ ಬಂದಿಲ್ಲ. ಆದರೆ, ಮುಖ್ಯ ಎಂಜಿನಿಯರ್‌ ಕೊಠಡಿಯ ಬಾಗಿಲು ತೆರೆದಿತ್ತು. ಕುರ್ಚಿಯಲ್ಲಿ ಮಾತ್ರ ಕುಳಿತುಕೊಳ್ಳುವ ಸಾಹಸಕ್ಕೆ ಕೈ ಹಾಕಿಲ್ಲ.

ಭೀಮರಾಯನಗುಡಿ ಆಡಳಿತ ಕಚೇ­ರಿಯ ಮುಂದೆ ಮತ್ತಷ್ಟು ಪೊಲೀಸ್‌ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಇಬ್ಬರು ಎಂಜಿನಿಯರ್‌ ಸ್ವಜಾತಿಯ ಮುಖಂಡರು ಪರ ವಿರೋಧದ ಹೋರಾಟ ನಡೆಸುವ ಚಿಂತನೆ ಶುರು­ವಾಗಿದೆ. ಇಬ್ಬರು ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಯ ಮುಖಂಡರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.