ADVERTISEMENT

ಸುರಪುರ: ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 6:37 IST
Last Updated 3 ಫೆಬ್ರುವರಿ 2023, 6:37 IST
ಸುರಪುರ ತಾಲ್ಲೂಕಿನ ಕೋನಾಳ ಗ್ರಾಮದ ಬಿಜೆಪಿಯ ಹಲವು ಮುಖಂಡರು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಸುರಪುರ ತಾಲ್ಲೂಕಿನ ಕೋನಾಳ ಗ್ರಾಮದ ಬಿಜೆಪಿಯ ಹಲವು ಮುಖಂಡರು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು   

ಸುರಪುರ: ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ತಾಲ್ಲೂಕಿನ ಕೋನಾಳ ಗ್ರಾಮದ ಬಿಜೆಪಿಯ ಹಲವು ಮುಖಂಡರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಅವರು ‘ಬಿಜೆಪಿಯವರು ಸುಳ್ಳು ಭರವಸೆ ನೀಡಿ, ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದಕ್ಕೆ ಬೇಸತ್ತು, ಸತ್ಯ ಮತ್ತು ಸ್ವಾಭಿಮಾನಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದು ರಾಜಾ ವೆಂಕಟಪ್ಪನಾಯಕ ಹೇಳಿದರು.

ಕಾಶಿಪತಿ ಹಿರೇಮಠ, ಶಂಕ್ರಯ್ಯಸ್ವಾಮಿ ಹೀರೆಮಠ, ಮಲ್ಲಯ್ಯಸ್ವಾಮಿ ನಾವದಗಿ, ವಿರುಪಾಕ್ಷಯ್ಯಸ್ವಾಮಿ ಹಿರೇಮಠ, ಬಸನಗೌಡ ವಡಗೇರಿ, ಬಸನಗೌಡ ಕೋಳ್ಳೂರ, ಬಸನಗೌಡ ಬೋನ್ಹಾಳ, ಶಿವನಗೌಡ ಪಾಟೀಲ, ವಿರಪಣ್ಣಗೌಡ ಕೋಳ್ಳೂರ, ಸಂಗನಗೌಡ ಪೋಲಿಸಪಾಟೀಲ, ವಿಶ್ವನಾಥ ವಡಗೇರಿ, ಪರಮಣ್ಣ ಮಡಿವಾಳ, ರಾಜಾಭಕ್ಷ ಯಲಬುರ್ಗಾ, ಬಂದಗಿಸಾಬ ಅಂಗಡಿ, ಮೌಲುದ್ದೀನ ಹೊಟೇಲ್, ಮೌಲಸಾಬ್ ಶೇಖಸಿಂದಿ, ದಸ್ತಗಿರ ಸಾಬ್, ಆನಂದ ನಗರಗುಂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ADVERTISEMENT

ವಿಠ್ಠಲ ಯಾದವ, ವೆಂಕೋಬ ಸಾಹುಕಾರ, ಮಲ್ಲಣ್ಣ ಸಾಹುಕಾರ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪೂರ, ಬಸಯ್ಯಸ್ವಾಮಿ, ಅಬ್ದುಲ್ ಗಫಾರ್ ನಗನೂರಿ, ಪರಣ್ಣಗೌಡ ಕೋನ್ಹಾಳ, ಈರಣ್ಣಗೌಡ ಗುಡಿಮನಿ ಸೇರಿದಂತೆ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.