ಯಾದಗಿರಿ: ಆಧುನಿಕ ಜೀವನ ಶೈಲಿ ಯಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡದ ಜೀವನದಲ್ಲಿ ಹಲವು ಆಕಸ್ಮಿಕ ಅಪಘಾತಗಳಂತಹ ಘಟನೆಗಳು ಸಂಭವಿ ಸಬಹುದು. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ರಕ್ತದ ಗುಂಪು ಗೊತ್ತಿದ್ದರೆ ವೈದ್ಯರು ಶೀಘ್ರದಲ್ಲಿ ಸ್ಪಂದಿಸಲು ಸಹಕಾರಿಯಾಗುತ್ತದೆ ಎಂದು ಡಾ.ಶರಣರಡ್ಡಿ ಕೊಡ್ಲಾ ಹೇಳಿದರು.
ಇಲ್ಲಿನ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ನಲ್ಲಿ ಬುಧವಾರ ಸೌಹಾರ್ದ ಸಹಕಾರಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ರಕ್ತ ಗುಂಪು ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ರಕ್ತದ ಗುಂಪು ಗೊತ್ತಿದ್ದರೆ ಅನುಕೂಲ. ಸರ್ಕಾರಿ ಯೋಜನೆಗಳ ಉಪಯೋಗ ಸೇರಿದಂತೆ ಜೀವ ವಿಮೆ ಪಡೆಯಲು ಕೂಡ ರಕ್ತದ ಗುಂಪು ಯಾವುದು ಎಂದು ತಿಳಿಯುವುದು ಅವಶ್ಯವಾಗಿದೆ ಎಂದರು.
ಶ್ರೀರಾಮ ಚಿಟ್ ಫಂಡ್ನ ಶಂಕರಗೌಡ ಪಾಟೀಲ, ಸಹಕಾರಿ ಬ್ಯಾಂಕ್ಗಳು ಗ್ರಾಹಕ ಸ್ನೇಹಿ ಆಗಿರುವುದಕ್ಕೆ ಸಾರ್ವಜನಿಕ ರಂಗದಲ್ಲಿ ಬಹುದೊಡ್ಡ ಸಂಸ್ಥೆಗಳಾಗಿ ಬೆಳೆಯುತ್ತಿವೆ. ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಕೂಡ ಆ ನಿಟ್ಟಿನಲ್ಲಿ ಬೆಳೆಯಲಿ ಎಂದು ಹಾರೈಸಿದರು.
ನಿರ್ದೇಶಕರಾದ ಸೋಮನಾಥರೆಡ್ಡಿ ಬಾಲಚೇಡಿ, ಡಾ.ರಾಯಣಗೌಡ ಪಾಟೀಲ, ಸಂಜಯ ಬಂಡಿಮನಿ, ಡಾ.ಶಶಿಭೂಷಣ ಪಟೇಲ್, ಶಂಕರನಾರಾಯಣ, ಕಾಸೀಂ ಪಟೇಲ್, ಮಹೇಶ ಪಾಟೀಲ, ಶಾಲಿನಿ ಮಾಬೂರಕರ, ಮಹಾಲಕ್ಷ್ಮಿ, ಗೌತಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.