ಹುಣಸಗಿ: ಸಮೀಪದ ಬೈಲಕುಂಟಿ ಗ್ರಾಮದ ಪ್ರಮುಖರು ಕಾಂಗ್ರೆಸ್ ಮುಖಂಡ ರಾಜಾ ರೂಪಕುಮಾರ ನಾಯಕ ಸಮ್ಮುಖದಲ್ಲಿ ಈಚೆಗೆ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಸ್ವಾಗತಿಸಿದ ರಾಜಾ ರೂಪಕುಮಾರ ನಾಯಕ ಮಾತನಾಡಿ, ಕ್ಷೇತ್ರದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿವೆ. ಈ ಭಾಗದ ರೈತರಿಗೆ ನೀಡಿದ ಭರವಸೆಯಂತೆ ಐದು ವರ್ಷ ಎರಡೂ ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗಿದೆ ಎಂದರು.
ಮುಖಂಡ ನಾಗಣ್ಣ ದಂಡಿನ್ ಮಾತನಾಡಿದರು. ಮುಖಂಡರಾದ ಚನ್ನಯ್ಯಸ್ವಾಮಿ ಹಿರೇಮಠ, ರವಿಚಂದ್ರ ಆನಂದ ಸಾಹುಕಾರ್, ಎನ್.ಎಂ.ಬಳಿ, ಆರ್.ಎಂ.ರೇವಡಿ, ಬಾಪುಗೌಡ ಪಾಟೀಲ್, ಸಿದ್ದಲಿಂಗಣ್ಣ ದೇಸಾಯಿ, ಹನುಮಗೌಡ, ಅಲವಪ್ಪ, ಅಡಿವೆಪ್ಪ, ಗಿರೀಶ ಗೆದ್ದಲಮರಿ, ದಂಡಪ್ಪಗೌಡ ತೋಳದಿನ್ನಿ ,ಭೀಮಣ್ಣ ಇದ್ದರು.
ನಿಂಗಪ್ಪ ಪೂಜಾರಿ, ಶರಣಬಸವ ಚಿನ್ನಾಕಾರ್, ಸೋಮನಿಂಗಪ್ಪ ಬಿರಾದಾರ್, ಬಸಣ್ಣ ಹರನಾಳ, ಹನುಮಂತ್ರಾಯ ಮೇಟಿ, ಸಾಬಣ್ಣ ಮಾರಲಬಾವಿ, ದ್ಯಾಮಣ್ಣ ಹರನಾಳ, ಜಟ್ಟೆಪ್ಪ ಕೆಳಗಿನಮನಿ, ಪರಸಪ್ಪ ಕೆಳಗಿನಮನಿ, ನಾಗಪ್ಪ ಪೂಜಾರಿ, ಬಸನಗೌಡ ಬಿರಾದಾರ, ಅಯ್ಯಪ್ಪ ಹರನಾಳ, ಗೋಪಾಲಪ್ಪ ಹರನಾಳ, ದೇವಪ್ಪ ಬಿರಾದಾರ, ಪಿಡ್ಡಪ್ಪ ಚಿನ್ನಾಕಾರ್, ವೆಂಕಪ್ಪ ದೇವತಕಲ್, ವೆಂಕಟೇಶ ಹಿರೇಹಳ್ಳ ಕಾಂಗ್ರೆಸ್ಗೆ ಸೇರ್ಪಡೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.