ADVERTISEMENT

‘ಅಂಬಿಗರ ಚೌಡಯ್ಯ ಜಾತ್ರೆಗೆ ಚಿಂತನೆ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 13:26 IST
Last Updated 13 ಜುಲೈ 2021, 13:26 IST
ಯರಗೋಳ ಗ್ರಾಮದ ಸಿದ್ದನಕಲ್ಲು ಪ್ರದೇಶದ ಗುಹೆ ಎದುರು ಬಸವರಾಜ ಗುಳೇದ ಅವರಿಗೆ ಕೋಲಿ ಸಮಾಜದಿಂದ ಸನ್ಮಾನಿಸಲಾಯಿತು
ಯರಗೋಳ ಗ್ರಾಮದ ಸಿದ್ದನಕಲ್ಲು ಪ್ರದೇಶದ ಗುಹೆ ಎದುರು ಬಸವರಾಜ ಗುಳೇದ ಅವರಿಗೆ ಕೋಲಿ ಸಮಾಜದಿಂದ ಸನ್ಮಾನಿಸಲಾಯಿತು   

ಯರಗೋಳ: ಗ್ರಾಮದ ಸಿದ್ದನಕಲ್ಲು ಗವಿಯಲ್ಲಿ 30 ವರ್ಷಗಳಿಂದ ನಿಸ್ವಾರ್ಥದಿಂದ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಬಸವರಾಜ ಗುಳೇದ ಅವರನ್ನು ಸೋಮವಾರ ಕೋಲಿ ಸಮಾಜದ ಮುಖಂಡರು ಸನ್ಮಾನಿಸಿದರು.

ಸನ್ಮಾನ ಮಾಡಿ ಮಾತನಾಡಿದ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಅವರು, 'ಗವಿ ಸುತ್ತಲಿನ ಹಸಿರು ವಾತಾವರಣ ಮನಸ್ಸಿಗೆ ನೆಮ್ಮದಿ ತರುತ್ತದೆ. ಇದನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ‘ ಎಂದರು.

ಕೋವಿಡ್‌ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಇನ್ನು ಮುಂದೆ ಎಲ್ಲಾ ಗ್ರಾಮಗಳಲ್ಲಿ ಸಮಾಜದ ಜಿಲ್ಲಾ ಸಂಘಟನೆಯಿಂದ ನಿರಂತರ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ADVERTISEMENT

ಜಿಲ್ಲೆಯಲ್ಲಿ 2022-23ರಲ್ಲಿ ಪ್ರತಿ ತಾಲ್ಲೂಕಿನಲ್ಲಿ ಅಂಬಿಗರ ಚೌಡಯ್ಯ ಅವರ ರಥೋತ್ಸವ, ಜಾತ್ರೆ ನಡೆಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುವುದರಿಂದ ಬಾಲ್ಯ ವಿವಾಹ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಇದರ ಬಗ್ಗೆಯೂ ಚಿಂತನೆ ಮಾಡಲಾಗುತ್ತದೆ ಎಂದರು.

ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಲು ಪಣ ತೊಡಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಆರ್ಥಿಕವಾಗಿ ಬೆಳೆಯಬೇಕು ಎಂದರು.

ಬಸಪ್ಪ, ಶೇಖರ, ನಿಂಗಪ್ಪ, ಗುರು, ಸಿದ್ದಪ್ಪ, ಮಲ್ಲಪ್ಪ, ಗೌಡಪ್ಪ, ಮಾದೇವಪ್ಪ, ಸಣ್ಣ ಗುಂಜಲಪ್ಪ, ಬಸವರಾಜ, ಸಿದ್ದಲಿಂಗಪ್ಪ, ಶಿವು, ರವಿ, ಸುರೇಶ, ಈಶಪ್ಪ, ಶರಣಪ್ಪ, ಬಸವರಾಜ, ಮಲ್ಲು, ಬನ್ನಪ್ಪ, ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.