ADVERTISEMENT

‘ಅಂಗವಿಕಲರಲ್ಲಿ ಆತ್ಮವಿಶ್ವಾಸ ತುಂಬಬೇಕು’

ಸುರಪುರ; ಅಂಗವಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:24 IST
Last Updated 5 ಡಿಸೆಂಬರ್ 2022, 4:24 IST
ಸುರಪುರದಲ್ಲಿ ಅಂಗವಿಕಲರ ಸಾಧನ ಸಲಕರಣೆಗಳ ಮಾಪನ ಶಿಬಿರವನ್ನು ರಾಜಾ ಮುಕುಂದ ನಾಯಕ ಉದ್ಘಾಟಿಸಿದರು
ಸುರಪುರದಲ್ಲಿ ಅಂಗವಿಕಲರ ಸಾಧನ ಸಲಕರಣೆಗಳ ಮಾಪನ ಶಿಬಿರವನ್ನು ರಾಜಾ ಮುಕುಂದ ನಾಯಕ ಉದ್ಘಾಟಿಸಿದರು   

ಸುರಪುರ: ‘ಅಂಗವಿಕಲರ ಬಗ್ಗೆ ಅನುಕಂಪ ಬೇಡ. ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದನಾಯಕ ಹೇಳಿದರು.

ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಾಗರಿಕರ ಸಬಲೀಕರಣ ಇಲಾಖೆ, ಎಪಿಎಫ್, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ಬಿ.ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಯುಕ್ತಾಶ್ರಯದಲ್ಲಿ ಅಂಗವಿಕಲರ ಸಾಧನ ಸಲಕರಣೆಗಳ ಮಾಪನ ಶಿಬಿರ ಉದ್ಘಾಟಿಸಿ ವರು ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಮಾತನಾಡಿದರು.

ADVERTISEMENT

ಎಪಿಡಿ ಸಂಸ್ಥೆಯ ಮಧು ಕೇಶವ್, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ, ಎಪಿಫ್ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ ಮಾತನಾಡಿದರು.

ರಾಜಾ ಪಾಮನಾಯಕ, ಪ್ರಕಾಶ ಸಜ್ಜನ್, ಬಸವರಾಜ ಜಮದ್ರಖಾನಿ, ವೆಂಕಟೇಶ ನಾಯಕ ಬೈರಿಮಡ್ಡಿ, ಓಂ ಪ್ರಕಾಶ ಡೋಣೂರು, ಅಂಗವಿಕಲರ ಸಂಘದ ಅಧ್ಯಕ್ಷ ಮಾಳಪ್ಪ ಪೂಜಾರಿ, ಮಹಾದೇವಪ್ಪ, ರಾಜಶೇಖರ ದೇಸಾಯಿ, ಸುನೀಲ್‍ ಕುಮಾರ ಇದ್ದರು.

ಶಿಬಿರದಲ್ಲಿ 400ಕ್ಕೂ ಹೆಚ್ಚು ಜನರನ್ನು ಎಬಿಡಿ ಸಂಸ್ಥೆಯ ವೈದ್ಯಕೀಯ ತಂಡದವರು ತಪಾಸಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.