ADVERTISEMENT

ಅಭಿವೃದ್ಧಿಗಾಗಿ ನನಗೆ ಅವಕಾಶ ನೀಡಿ: ರಾಜೂ ಗೌಡ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 2:15 IST
Last Updated 17 ಏಪ್ರಿಲ್ 2023, 2:15 IST
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೂಗೌಡ ಮತ ಯಾಚನೆ ಮಾಡಿದರು
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೂಗೌಡ ಮತ ಯಾಚನೆ ಮಾಡಿದರು   

ಸುರಪುರ: ‘ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಶಾಸಕರು ತರಲು ಸಾಧ್ಯವಾಗದಷ್ಟು ಅನುದಾನ ತಂದಿದ್ದೇನೆ. ಅಭಿವೃದ್ಧಿಯ ಹೊಲೆಯನ್ನೇ ಹರಿಸಿದ್ದೇನೆ. ಅಭಿವೃದ್ಧಿಗಾಗಿಯೇ ಮತ್ತೊಮ್ಮೆ ನನಗೆ ಅವಕಾಶ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ರಾಜೂಗೌಡ ಮನವಿ ಮಾಡಿದರು.

ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಭಾನುವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಡಬಲ್ ಎಂಜಿನ್ ಸರ್ಕಾರ ಇದ್ದರೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತವೆ. ಮತದಾರರು ಯೋಚನೆ ಮಾಡಿ ಮತ ನೀಡಿ. ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ವಿನಂತಿಸಿದರು.

ADVERTISEMENT

ರಾಜಾ ಹನುಮಪ್ಪನಾಯಕ ತಾತಾ, ಮರಿಲಿಂಗಪ್ಪನಾಯಕ ಕರ್ನಾಳ, ಬಲಭೀಮನಾಯಕ ಭೈರಿಮರಡಿ, ಸಾಹೇಬಗೌಡ ದೇವಿಕೇರಿ, ಮಲ್ಲನಗೌಡ ಪಾಟೀಲ ದೇವಿಕೇರಿ, ರಂಗನಗೌಡ ದೇವಿಕೇರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.