ADVERTISEMENT

‘ಬಸವಣ್ಣನ 108 ವಚನಗಳು’ ಕೃತಿ ಬಿಡುಗಡೆ

ಜಿ.ಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸಂಪಾದಿಸಿದ ಪುಸ್ತಕ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 6:08 IST
Last Updated 2 ನವೆಂಬರ್ 2021, 6:08 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಸಂಪಾದಿಸಿದ ‘ಬಸವಣ್ಣನವರ 108 ವಚನಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಸವರಾಜ ಸಿನ್ನೂರ ಮಾತನಾಡಿದರು. ವೆಂಕಟೇಶ ಯರಗೋಳ, ಮಲ್ಲಿಕಾರ್ಜುನ ಸಂಗವಾರ್, ಮಲ್ಲಣ್ಣ ಇದ್ದರು
ಯಾದಗಿರಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಸಂಪಾದಿಸಿದ ‘ಬಸವಣ್ಣನವರ 108 ವಚನಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಸವರಾಜ ಸಿನ್ನೂರ ಮಾತನಾಡಿದರು. ವೆಂಕಟೇಶ ಯರಗೋಳ, ಮಲ್ಲಿಕಾರ್ಜುನ ಸಂಗವಾರ್, ಮಲ್ಲಣ್ಣ ಇದ್ದರು   

ಯಾದಗಿರಿ: ನಗರದ ಲೋಕಸೇವಕರ ಬಡಾವಣೆಯ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ವಸತಿ ಗೃಹದ ಬಳಿ ಮುಕ್ಕಣ್ಣ ಕರಿಗಾರ ಅವರು ಸಂಪಾದಿಸಿದ ‘ಬಸವಣ್ಣನವರ 108 ವಚನಗಳು’ ಕೃತಿ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಿನ್ನೂರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಉಪಕಾರ್ಯದರ್ಶಿಯಂತ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದೂ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕರಿಗಾರ ಕಾರ್ಯ ಶ್ಲಾಘನೀಯ’ ಎಂದು ಅಭಿಪ್ರಾಯಿಸಿದರು.

‘ಪ್ರಜಾವಾಣಿ’ ದಿನಪತ್ರಿಕೆಯ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ ಮಾತನಾಡಿ, ‘ಮುಕ್ಕಣ್ಣ ಕರಿಗಾರ ಅವರು ಅಧಿಕಾರಿ ಎನ್ನುವುದಕ್ಕಿಂತ ‘ಪ್ರಜಾವಾಣಿ’ ಹಿತೈಷಿ ಓದುಗರು ಮತ್ತು ಮುಕ್ತಮನಸ್ಸಿನ ಚಿಂತಕರಾಗಿದ್ದಾರೆ. ವೇದೋಪನಿಷತ್ತುಗಳಿಂದ ಹಿಡಿದು ಆಧುನಿಕ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ನಿಖರವಾಗಿ ಬರೆಯಬಲ್ಲ ಅವರ ಸಾಮರ್ಥ್ಯದ ಹಿಂದೆ ಅವರ ಆಳವಾದ ಅಧ್ಯಯನ ಇದೆ. ಗ್ರಾಮ ಪಂಚಾಯಿತಿಯ ಸದಸ್ಯರ ಮಾರ್ಗದರ್ಶನಕ್ಕೆ ಅವರು ಬರೆದ ಪುಸ್ತಕಅಧಿಕಾರದ ಮಹತ್ವ
ತಿಳಿಸುತ್ತದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಯರಗೋಳ ಮಾತನಾಡಿದರು. ವಡಗೇರಾ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗವಾರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಕ್ಕಣ್ಣ ಕರಿಗಾರ ಅವರು ‘ಬಸವಣ್ಣನವರ ವ್ಯಕ್ತಿತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಸವಣ್ಣನವರ ಉಪಲಬ್ಧ 961 ವಚನಗಳಲ್ಲಿ 108 ವಚನಗಳನ್ನುಕೃತಿಯಲ್ಲಿಪ್ರಕಟಿಸಿದ್ದೇನೆ’ ಎಂದರು. ಕರುನಾಡವಾಣಿ ಆನ್‌ಲೈನ್ ಪತ್ರಿಕೆಯ ಸಂಪಾದಕ ಬಸವರಾಜ ಕರೆಗಾರ, ಗುರುಮಠಕಲ್ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಲ್ಲಣ್ಣ, ಕಿಶನ್ ರಾಠೋಡ್ ಅವರು ಸ್ವಾಗತಿಸಿ, ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.