ADVERTISEMENT

ಬಸ್ ಪಲ್ಟಿ: 20 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 3:33 IST
Last Updated 5 ಡಿಸೆಂಬರ್ 2021, 3:33 IST
ತೆಲಂಗಾಣ ರಾಜ್ಯದ ನಾರಾಯಣಪೇಟ-ಲೋಕಪಲ್ಲಿ ನಡುವೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿರುವುದು
ತೆಲಂಗಾಣ ರಾಜ್ಯದ ನಾರಾಯಣಪೇಟ-ಲೋಕಪಲ್ಲಿ ನಡುವೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿರುವುದು   

ಗುರುಮಠಕಲ್: ಕಲಬುರಗಿ ಜಿಲ್ಲೆಯ ಸೇಡಂ ಬಸ್ ಘಟಕದ ಸೇಡಂ-ಹೈದರಾಬಾದ್ ಮಾರ್ಗದ ಕೆ.ಎ.32 ಎಫ್ 2419 ಬಸ್ ಪಲ್ಟಿಯಾಗಿ 20 ಜನರಿಗೆ ಗಾಯಗಳಾದ ಘಟನೆ ಶನಿವಾರ ಜರುಗಿದೆ.

ಶನಿವಾರ ಬೆಳಿಗ್ಗೆ ಸೇಡಂ ನಗರದಿಂದ ಗುರುಮಠಕಲ್ ತಾಲ್ಲೂಕಿನ ಚಂಡರಿಕಿ ಮಾರ್ಗವಾಗಿ ಹೈದರಾಬಾದ್‌ ನಗರಕ್ಕೆ ತೆರಳುವಾಗ ತೆಲಂಗಾಣ ರಾಜ್ಯದ ನಾರಾಯಣಪೇಟ-ಲೋಕಪಲ್ಲಿ ನಡುವೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿದೆ.

ಗಾಯಾಳುಗಳಿಗೆ ನಾರಾಯಣಪೇಟ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸೇಡಂ ಹಾಗೂ ಗುರುಮಠಕಲ್ ಬಸ್ ಘಟಕಗಳ ವ್ಯವಸ್ಥಾಪಕರಿಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ.

ADVERTISEMENT

ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಎಲ್ಲರಿಗೂ ಸಾಮಾನ್ಯ ಗಾಯಗಳಾಗಿವೆ. ಈ ಮಾರ್ಗದಲ್ಲಿ‌ ಮೊದಲ ಬಾರಿಗೆ ಬಂದಿದ್ದ ಚಾಲಕನಿಗೆ ರಸ್ತೆಯ ತಿರುವಿನ ಕುರಿತು ಗೊತ್ತಿರಲಿಲ್ಲ. ಬಸ್‌ ವೇಗದಲ್ಲಿದ್ದ ಕಾರಣ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾರಾಯಣಪೇಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.