ಶಹಾಪುರ: ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ವಾತಾವರಣದಲ್ಲಿ ಏರುಪೇರು ಹಾಗೂ ವಾಯುಭಾರ ಕುಸಿತದಿಂದ ಶೀತಗಾಳಿಯ ಜತೆಗೆ ತುಂತುರು ಮಳೆಯಿಂದ ಜನತೆ ತತ್ತರಿಸಿ ಹೋದರು. ಇಲ್ಲಿನ ಜನತೆ ಚಳಿ ಎಂದರೆ ಮಾರುದ್ದ ಹೋಗುವರು ಬೆಳಿಗ್ಗೆಯಿಂದ ಚಳಿಯಿ ಹೊಡೆತಕ್ಕೆ ತ್ವರಿತವಾಗಿ ಮನೆಯ ಗೂಡು ಸೇರಿದರು.
ಆದರೆ ಭತ್ತ ಕೊಯ್ಲಿಗೆ ಬಂದಿದ್ದು, ರೈತರು ಜೀವ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ವಾರದ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಒಂದಿಷ್ಟು ಚೇತರಿಸಿಕೊಂಡವರಿಗೆ ಮತ್ತೆ ಮಳೆಯ ಭೀತಿ ಆವರಿಸಿ ಮನದಲ್ಲಿ ಆತಂಕ ಮೂಡಿಸಿದೆ. ಅದರಂತೆ ಹತ್ತಿ ಕೀಳಬೇಕು ಎಂದು ಜಮೀನುಗಳಿಗೆ ತೆರಳಿದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಿದರು.
ಹೂ ಕಟ್ಟುವ ಹಂತದಲ್ಲಿರುವ ತೊಗರಿ ಹಾಗೂ ಬಿಳಿಜೋಳಕ್ಕೆ ತೇವಾಂಶದ ಏರುಪೇರಿನಿಂದ ಬೆಳೆ ಹಾನಿ ಆಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತ ನಾಗಪ್ಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.