ADVERTISEMENT

ವರಮಹಾಲಕ್ಷ್ಮಿ ಪೂಜೆಗೆ ತಟ್ಟಿದ ಕೊರೊನಾ ಬಿಸಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:40 IST
Last Updated 30 ಜುಲೈ 2020, 16:40 IST
ಯಾದಗಿರಿಯ ಗಾಂಧಿವೃತ್ತದಲ್ಲಿ ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ವ್ಯಾಪಾರಿಗಳು
ಯಾದಗಿರಿಯ ಗಾಂಧಿವೃತ್ತದಲ್ಲಿ ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ವ್ಯಾಪಾರಿಗಳು   

ಯಾದಗಿರಿ: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದುವರಮಹಾಲಕ್ಷ್ಮಿ ಪೂಜೆಗೆ ಕರಿನೆರಳು ಬಿದ್ದಿದೆ. ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಂದಿದೆ.ರೈತಾಪಿ ವರ್ಗ ವಿವಿಧ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಗುರುವಾರ ನಗರದ ಗಾಂಧಿ ವೃತ್ತದ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡು ಬರಲಿಲ್ಲ.

ಪೂಜೆಗೆ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬರಲಿಲ್ಲ. ಈ ಬಾರಿ ಲಾಕ್‌ಡೌನ್‌ ವೇಳೆ ಹೂವಿನ ವ್ಯಾಪಾರಿಗಳು ನಷ್ಟ ಉಂಟಾಗಿದ್ದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಗ್ರಾಹಕರಿಗಾಗಿಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ತೆಂಗಿನ ಕಾಯಿ ₹15ರಿಂದ 20 ಮಾರಾಟವಾಗುತ್ತಿತ್ತು. ಒಂದು ಮೊಳ ಹೂ ₹50ರಿಂದ 200 ರ ತನಕ ಬೆಲೆ ಇದೆ. ಹಲವಾರು ಅಂಗಡಿಗಳ ಮಾಲೀಕರು ಗ್ರಾಹಕರಿಲ್ಲದೆ ಖಾಲಿ ಕುಳಿತ್ತಿದ್ದರು. ಈ ಬಗ್ಗೆ ಹೂವಿನ ವ್ಯಾಪಾರಿ ಮಹಮದ್ ಪ್ರತಿಕ್ರಿಯಿಸಿ, ಈ ಬಾರಿ ಹಬ್ಬದ ಸಂಭ್ರಮ ಕೊರೊನಾ ಕಸಿದುಕೊಂಡಿದೆ. ಹಳ್ಳಿಗಳಿಂದ ಜನರು ಖರೀದಿಗೆ ಬಂದಿಲ್ಲ. ನಗರದ ಪ್ರದೇಶದಲ್ಲಿಯೂ ಹೆಚ್ಚಿನ ಜನಸಂಖ್ಯೆ ಬಂದಿಲ್ಲ. ಇದರಿಂದ ವ್ಯಾಪಾರವೇ ಇಲ್ಲ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.