ADVERTISEMENT

ಶಹಾಪುರ | ಬೆಳೆ ಪರಿಹಾರ ಅರ್ಜಿಗೆ ₹ 10 ಸಾವಿರ ಲಂಚ: ವಿಎ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 0:17 IST
Last Updated 8 ಅಕ್ಟೋಬರ್ 2025, 0:17 IST
<div class="paragraphs"><p>ಬಂಧನ </p></div>

ಬಂಧನ

   

ಶಹಾಪುರ (ಯಾದಗಿರಿ ಜಿಲ್ಲೆ): ಬೆಳೆ ಪರಿಹಾರದ ಅರ್ಜಿ ಸ್ವೀಕರಿಸಲು ಲಂಚಕ್ಕೆ ಬೇಡಿಕೆ ಇರಿಸಿ ₹ 9,000 ಫೋನ್‌ ಪೇ ಮೂಲಕ ಲಂಚ ಪಡೆದ ಆರೋಪದಡಿ ಗ್ರಾಮ ಆಡಳಿತಗಾರ (ವಿಎ) ಒಬ್ಬರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಪ್ರಭಾರ ಗ್ರಾಮ ಆಡಳಿತಗಾರ ಸಿದ್ದಲಿಂಗ ಮಲ್ಲಣ್ಣ ಪಾಟೀಲ (45) ಲಂಚ ಪಡೆದ ಆರೋಪಿ. ಸುರಪುರದ ರಾಜಾ ರಾಮಪ್ಪ ನಾಯಕ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ADVERTISEMENT

ಒಟ್ಟು ₹ 10,000ಕ್ಕೆ ಸಿದ್ದಲಿಂಗ ಬೇಡಿಕೆ ಇರಿಸಿದ್ದರು. ಇದರಲ್ಲಿ ಯುಪಿಐ ಮೂಲಕ ₹ 9,000 ಪಡೆಯುವಾಗ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿದ್ದರಾಜ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಚ್. ಇನಾಂದಾರ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.