ADVERTISEMENT

ಯಾದಗಿರಿ | ಪ್ರಜಾಪ್ರಭುತ್ವ ದಿನ: ಅಂಗವಿಕಲರಿಂದ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:57 IST
Last Updated 15 ಸೆಪ್ಟೆಂಬರ್ 2024, 15:57 IST
<div class="paragraphs"><p>ವಡಗೇರಾ ತಾಲ್ಲೂಕಿನ ರೊಟ್ನಡಗಿ ಕ್ರಾಸ್ ಸಮೀಪದಲ್ಲಿ ಅಂಗವಿಕಲರು ಭಾನುವಾರ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು </p></div>

ವಡಗೇರಾ ತಾಲ್ಲೂಕಿನ ರೊಟ್ನಡಗಿ ಕ್ರಾಸ್ ಸಮೀಪದಲ್ಲಿ ಅಂಗವಿಕಲರು ಭಾನುವಾರ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು

   

ಯಾದಗಿರಿ: ಬೀದರ್‌ ಜಿಲ್ಲೆಯಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ವಡಗೇರಾ ತಾಲ್ಲೂಕಿನ ರೊಟ್ನಡಗಿ ಕ್ರಾಸ್ ಸಮೀಪದಲ್ಲಿ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಗೌಡ ಪಾಟೀಲ ನೇತೃತ್ವದಲ್ಲಿ ಸೇರಿದ್ದ ನೂರಾರು ಸಂಖ್ಯೆಯ ಅಂಗವಿಕಲರು ಪರಸ್ಪರ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ಯಶಸ್ವಿಗೊಳಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಂಗವಿಕಲರು ಜಿಲ್ಲಾಡಳಿತ ಸೂಚಿಸಿದ ನಿಗದಿತ ರಸ್ತೆ ಬದಿಯಲ್ಲಿ ಸಾಲಾಗಿ ನಿಂತು ಮಾನವ ಸರಪಳಿ ನಿರ್ಮಿಸಿಕೊಂಡರು. ತದನಂತರ ಸಾಮೂಹಿಕವಾಗಿ ನಾಡಗೀತೆ ಹಾಡಲಾಯಿತು. ಈ ವೇಳೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ ಅವರು ಸಂವಿಧಾನದ ಪ್ರಸ್ತಾವನೆ ಹಾಗೂ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಕೊನೆಗೆ ಜೈ ಹಿಂದ್ ಜೈ ಕರ್ನಾಟಕ ಘೋಷಣೆ ಕೂಗುವ ಮೂಲಕ ಮಾನವ ಸರಪಳಿ ಕೈ ಬಿಡಲಾಯಿತು.

ADVERTISEMENT

ಈ ವೇಳೆ ಎಂಆರ್‌ಡಬ್ಲ್ಯೂ ಭೀಮರಾಯ ಕೌಳೂರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ವೆಂಕಟೇಶ ನಾಯಕ ಕೂಡ್ಲೂರು, ಬನ್ನಪ್ಪ ಮಾಧ್ವಾರ, ಬನಶಂಕರ ಕಾಳೆಬೆಳಗುಂದಿ, ಸಿದ್ದಪ್ಪ ಮಲ್ಹಾರ, ತಾಯಪ್ಪ ಸೈದಾಪುರ, ಬಸವರಾಜ ಬೆಳಗುಂದಿ, ಬಸವರಾಜ ಬಾಡಿಯಾಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.