ಮುನಗಾಲ (ಸೈದಾಪುರ): ಮುನಗಾಲ ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ಸಿದ್ದಮ್ಮ ಭೀಮಪ್ಪ ಕೌಳೂರು (45) ಎಂಬುವರು ಮೃತಪಟ್ಟಿದ್ದಾರೆ.
ಗ್ರಾಮದ ಬಳಿ ಹೊಲದಲ್ಲಿ ಸಿದ್ದಮ್ಮ ಶೇಂಗಾ ಕೀಳಲು ಹೋಗಿದ್ದರು. ಮಳೆ ಬರುವ ವಾತಾವರಣ ಕಂಡು ಕೂಲಿಕಾರ್ಮಿಕರು ಮನೆಗಳಿಗೆ ಮರಳಿದ್ದಾರೆ. ಆದರೆ, ಮಳೆ ನಿಂತ ಬಳಿಕ ಮನೆಗೆ ಹೋಗಬೇಕೆಂದು ಅವರು ಮರದ ಕೆಳಗೆ ಕೂತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.