ಯಾದಗಿರಿ: ಆರ್ಯ ಈಡಿಗ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಮಹೇಂದ್ರ ಕುಮಾರ ಅನಪುರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿದ ಮುಖಂಡರು, ಸಮಾಜಕ್ಕಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರೇಂದ್ರಗೌಡ ಮಾನಸಗಲ್, ರಾಜಶೇಖರಗೌಡ ವಡಗೇರಾ, ನಾಗರಾಜಗೌಡ ಮಾನಸಗಲ್, ರವೀಂದ್ರಗೌಡ ಮುಂಡರಗಿ, ಕಾಶಪ್ಪ ಮುಸ್ಟೂರು, ಮಲ್ಲಯ್ಯ ಗುಂಡಗುರ್ತಿ, ಸೂರ್ಯಕಾಂತ ಯರಗೋಳ, ದೇವಪ್ಪ ಗೌಡ ರಾಚನಹಳ್ಳಿ, ವೆಂಕಟೇಶ್ ಬದ್ದೇಪಲ್ಲಿ, ಮರಿಯಪ್ಪ ಇಬ್ರಾಹಿಂಪುರ, ಬಾಲಾಜಿ ಪೊಲೀಸ್, ರಾಘವೇಂದ್ರ ಕಲಾಲ್ ಸೈದಾಪುರ, ಶರಣು ಗುತ್ತೇದಾರ್ ಮಳ್ಳಳ್ಳಿ, ದತ್ತಾತ್ರೇಯ ಶಾಬಾದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.