ಯಾದಗಿರಿ: ತಾಲ್ಲೂಕಿನ ಗುಡೂರು ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಭಾನುವಾರ ನೀರು ಕುಡಿಯಲು ಹೋಗಿದ್ದ ಕುರಿಗಾಹಿ ಬಸವಲಿಂಗಪ್ಪ ರಾಮಣ್ಣವರ್ (58) ಮೊಸಳೆಗಳ ದಾಳಿಗೆ ಬಲಿಯಾಗಿದ್ದಾರೆ.
‘ಮಧ್ಯಾಹ್ನ 1.30ರ ಸುಮಾರಿಗೆ ಕುರಿಗಳಿಗೆ ನೀರು ಕುಡಿಸಿ, ನಂತರ ತಾವು ನೀರು ಕುಡಿಯಲು ನದಿಗೆ ಇಳಿದಿದ್ದರು. ಆಗ ಎರಡು ಮೊಸಳೆಗಳು ದಾಳಿ ಮಾಡಿ ಅವರ ಬಲಗಾಲು ಮತ್ತು ಎಡಗೈಯನ್ನು ತಿಂದು ಹಾಕಿದವು. ಸ್ಥಳೀಯ ಮೀನುಗಾರರ ಸಹಾಯದಿಂದ ಮೃತದೇಹವನ್ನು ಹೊರತರಲಾಯಿತು’ ಎಂದು ಬಸವಲಿಂಗಪ್ಪ ಅವರ ಜತೆ ಕುರಿ ಕಾಯಲು ಹೋಗಿದ್ದ ನಿಂಗಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.