
ಪ್ರಜಾವಾಣಿ ವಾರ್ತೆ
ಹುಣಸಗಿ: ತಾಲ್ಲೂಕಿನ ವಜ್ಜಲ ತಾಂಡಾದ ವಿದ್ಯಾರ್ಥಿ ನವೀನ್ ಕುಮಾರ ಶಂಕರ್ ಚವ್ವಾಣ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ನವೀನ್ ಕುಮಾರ ಚವ್ವಾಣ ತಾಲ್ಲೂಕಿನ ವಜ್ಜಲ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯ ವರೆಗೆ ಅಭ್ಯಾಸ ಮಾಡಿದ್ದು, ಸದ್ಯ ಧಾರವಾಡದ ಎನ್.ಎ.ಮುತ್ತಣ್ಣ ಪೊಲೀಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.
ಮದ್ಯಪ್ರದೇಶದ ಭಾವನ್ನಲ್ಲಿ ನಡೆಯುತ್ತಿರುವ 69ನೇ 14 ವರ್ಷದ ಒಳಗಿನ ಮಕ್ಕಳ ಶೂಟಿಂಗ್ ರೈಫಲ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಶಂಕರ್ ಚವ್ವಾಣ ಮಾಹಿತಿ ನೀಡಿದ್ದಾರೆ.
ಇಂದಿನಿಂದ ಐದು ದಿನಗಳ ಕಾಲ ಈ ಸ್ಪರ್ಧೆ ಭಾವನ್ದಲ್ಲಿ ನಡೆಯುತ್ತಿದೆ. ತಮ್ಮ ತಂಡದೊಂದಿಗೆ ತೆರಳಿದ್ದಾನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.