ಕಾಳಗಿ: ತಾಲ್ಲೂಕಿನ ಕೊಡದೂರ ಗ್ರಾಮದ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮುಕುಂದರಾವ ಮೂಲಿಮನಿ ಸ್ಮರಣಾರ್ಥ ಮತ್ತು ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಅಂಗವಾಗಿ ಕಾಳಗಿ ಹೊಸ ಬಸ್ ನಿಲ್ದಾಣದಲ್ಲಿ ಈಚೆಗೆ ಮಹಾಪುರುಷರ ಭಾವಚಿತ್ರ ಲೋಕಾರ್ಪಣೆ ಮಾಡಲಾಯಿತು.
ಗೌತಮಬುದ್ಧ, ಸಾಂಸ್ಕೃತಿಕ ನಾಯಕ ಬಸವೇಶ್ವರ, ಡಾ.ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಪ್ರಯಾಣಿಕರ ಪ್ರದರ್ಶನಕ್ಕೆ ಅಳವಡಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ‘ಬುದ್ಧ, ಬಸವ, ಅಂಬೇಡ್ಕರ್ ಈ ದೇಶದ ಅಸ್ತಿ. ಕಾಂಗ್ರೆಸ್ ಸಂವಿಧಾನ ಆಶಯದಂತೆ ಕೆಲಸ ಮಾಡುತ್ತಿದೆ. 371(ಜೆ) ಜಾರಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಉಳಿಯಬೇಕೆಂದರೆ ಸಂವಿಧಾನ ಉಳಿಸಬೇಕು’ ಎಂದು ಹೇಳಿದರು.
ಡಿಎಸ್ಎಸ್ ಸಂಘಟನೆ ಸಂಚಾಲಕ ಮರೆಪ್ಪ ಹಳ್ಳಿ, ಕಾಂಗ್ರೆಸ್ ಯುವ ನಾಯಕ ಚಿಂತನ್ ರಾಠೋಡ, ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಪಂಚಗ್ಯಾರಂಟಿ ಯೋಜನೆ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಅಂಬಯ್ಯ ಗುತ್ತೇದಾರ, ಶಂಕರ ಹೇರೂರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಜಮಾದಾರ, ಸಂತೋಷ ನರನಾಳ, ಗಣಪತಿ ಹಾಳಕಾಯಿ, ಕಲ್ಯಾಣರಾವ ಡೊಣ್ಣೂರ, ಶಿವು ಗೋಟೂರ, ಶಿವಾನಂದ ಮಜ್ಜಗಿ, ನಿಂಗಪ್ಪ ಸಾಹುಕಾರ, ಲಾಲಪ್ಪ ಹೋಳ್ಕರ, ಖತಲಪ್ಪ ಅಂಕನ, ಮಸ್ತಾನಸಾಬ, ಶರಣು ಮಜ್ಜಗಿ, ಪ್ರಕಾಶ ಸೇಗಾಂವಕರ, ಬಂಡು ಗದ್ದಿ, ಪ್ರದೀಪ ಡೊಣ್ಣೂರ, ಪುರುಷೋತ್ತಮ ಗುತ್ತೇದಾರ, ರೇವಣಸಿದ್ದಪ್ಪ ಮುಕರಂಬಾ, ರೇವಣಸಿದ್ದಪ್ಪ ಕೇಶ್ವಾರ, ಪ್ರಶಾಂತ ರಾಜಾಪುರ, ಮಲ್ಲಪ್ಪ ದಿಗ್ಗಾಂವ, ನಾಗರಾಜ ಚಿನ್ನ, ಮಡಿವಾಳ ಗುಂಡಗುರ್ತಿ, ಸಂತೋಷ ಹೊಸಳ್ಳಿ, ಕೃಷ್ಣ ಕೋಡ್ಲಿ, ಸಿದ್ದು ಬುಬಲಿ, ಸಿದ್ದಣ್ಣ ಶೆಟ್ಟಿ, ಶಂಕರ ಮೂಲಿಮನಿ, ಸಂಸ್ಥೆ ಕಾರ್ಯದರ್ಶಿ ಅವಿನಾಶ ಕೊಡದೂರ ಹಾಜರಿದ್ದರು. ಶಾಂತಕುಮಾರ ಸಾಲಹಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.