ADVERTISEMENT

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:37 IST
Last Updated 24 ನವೆಂಬರ್ 2022, 5:37 IST
ಶಹಾಪುರ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಬಿಡಿಸಿ ರಂಗೋಲಿಯನ್ನು ಬಿಇಒ ಶಿಬಾ ಜಿಲಿಯನ್ ವೀಕ್ಷಿಸಿದರು
ಶಹಾಪುರ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಬಿಡಿಸಿ ರಂಗೋಲಿಯನ್ನು ಬಿಇಒ ಶಿಬಾ ಜಿಲಿಯನ್ ವೀಕ್ಷಿಸಿದರು   

ಶಹಾಪುರ: ‘ಮಕ್ಕಳ ಪ್ರತಿಭೆಯನ್ನು ಅರಳಿಸುವ ವೇದಿಕೆ ಪ್ರತಿಭಾ ಕಾರಂಜಿ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಕವಾಗಿರುವ ಕಲೆಯನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸು ಸಾಧಿಸಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕೀರ್ತಿ ಹೆಚ್ಚಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್ ತಿಳಿಸಿದರು.

ನಗರದ ಸಹರಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ಮಾತನಾಡಿದರು.

ADVERTISEMENT

ಸಹರ ಶಾಲೆ ಅಧ್ಯಕ್ಷನಾಸಿರುದ್ದೀನ್, ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ, ಬಿ.ಹೆಚ್.ಸೂರ್ಯವಂಶಿ, ಶರಣಪ್ಪ ಪಾಟೀಲ, ಭೀಮನ ಗೌಡ ತಳೆವಾಡ, ಬಸವರಾಜ ಯಾಳಗಿ, ಶಂಕ್ರೆಪ್ಪ ಗೊಂದೆನೂರ, ಜಗದೀಶ ಗೋಟ್ಲ, ಮುರ್ತುಜಾ ಮುಲ್ಲಾ, ಚಂದ್ರಶೇಖರ ವೈದ್ಯ, ನೋಡಲ್ ಅಧಿಕಾರಿಗಳಾದ ಕಾಡಯ್ಯಹಿರೇಮಠ, ವೀರಯ್ಯ ಹೀರೇಮಠ, ವೀರಭದ್ರಯ್ಯ, ಪ್ರಕಾಶ, ಮಲ್ಕಪ್ಪ, ಶಾಂತಗೌಡ, ರಮೇಶ, ಮೈಲಾರಪ್ಪ, ರಾಮನಗೌಡ, ಚಂದಪ್ಪ, ಚಂದ್ರಶೇಖರ ಗೋಗಿ, ಲಕ್ಷ್ಮಣ ಲಾಳಸೇರಿ, ಆನಂದ ನಾಯಕ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.